September 20, 2024
Advt.
ದೂರದ ಕುವೈತ್ ನಲ್ಲಿ ಉದ್ಯೋಗಿಯಾಗಿರುವ ಸುರತ್ಕಲ್ ಶಿಬರೂರಿನ ಶ್ರೀ ರಾಜ್ ಭಂಡಾರಿ ತಿರುಮಲೆಗುತ್ತು ಮತ್ತು ಶ್ರೀಮತಿ ವಿಶಾಲಾಕ್ಷಿ ಶೆಟ್ಟಿ ದಂಪತಿಯು ಮೇ 8 ರ ಮಂಗಳವಾರ ತಮ್ಮ ವೈವಾಹಿಕ ಜೀವನದ ದಶಮಾನೋತ್ಸವದ ಸಂಭ್ರಮದಲ್ಲಿದ್ದಾರೆ.
ಶ್ರೀಯುತ ರಾಜ್ ಭಂಡಾರಿಯವರು ಮೂಲ್ಕಿ ಕಿಲ್ಪಾಡಿಯ ತಿರುಮಲೆಗುತ್ತು ಶ್ರೀ ರಾಘವ ಭಂಡಾರಿ ಮತ್ತು ಶ್ರೀಮತಿ ರಮಾ ಭಂಡಾರಿ ದಂಪತಿಯ ಪುತ್ರ.
ಈ ಸುಸಂದರ್ಭದಲ್ಲಿ ದಂಪತಿಗೆ ಶುಭ ಹಾರೈಸುತ್ತಿರುವವರು ತಂದೆ,ತಾಯಿ,ಮಗ ಮಾಸ್ಟರ್ ವಿರಾಟ್,ಸಹೋದರ ಶ್ರೀ ಭಾಸ್ಕರ್ ಭಂಡಾರಿ,ಸಹೋದರಿಯರಾದ ಮಲ್ಲಿಕಾ,ವತ್ಸಲಾ,ಪದ್ಮಾ ಮತ್ತು ನಂದಿನಿ ಹಾಗೂ ಬಂಧುಮಿತ್ರರು.

ದಾಂಪತ್ಯ ಜೀವನದ ಹತ್ತು ವರ್ಷಗಳನ್ನು ಪೂರೈಸಿ ಹನ್ನೊಂದನೇ ವರ್ಷಕ್ಕೆ ಕಾಲಿಡುತ್ತಿರುವ ಶ್ರೀ ರಾಜ್ ಭಂಡಾರಿ ದಂಪತಿಗೆ ಶ್ರೀ ದೇವರು ಆಯುರಾರೋಗ್ಯ ಐಶ್ವರ್ಯ ಭಾಗ್ಯವನ್ನಿತ್ತು ಆಶೀರ್ವದಿಸಿ ಅವರ ಸಕಲ ಇಷ್ಠಾರ್ಥಗಳನ್ನೂ ನೆರವೇರಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ ಮದುವೆಯ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
Advt.

-ಭಂಡಾರಿವಾರ್ತೆ

Leave a Reply

Your email address will not be published. Required fields are marked *