September 20, 2024
ಚಿಕ್ಕಮಗಳೂರು ಜಿಲ್ಲೆಯ ಕಡಬಗೆರೆಯ ಶ್ರೀ ಅಶೋಕ್ ಭಂಡಾರಿ ಮತ್ತು ಶ್ರೀಮತಿ ಪ್ರಮೀತಾ ಅಶೋಕ್ ಭಂಡಾರಿ ದಂಪತಿಯು ಏಪ್ರಿಲ್ 27 ರ ಶುಕ್ರವಾರ ತಮ್ಮ ಮದುವೆಯ ಹದಿನೆಂಟನೆಯ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಈ ಸುಸಂದರ್ಭದಲ್ಲಿ ಅವರ ತಂದೆ ಶ್ರೀ ವಿಠ್ಠಲ ಭಂಡಾರಿ, ತಾಯಿ ಶ್ರೀಮತಿ ರತಿ ವಿಠ್ಠಲ ಭಂಡಾರಿ, ಅಕ್ಕಂದಿರಾದ ಶ್ರೀಮತಿ ಮೀನಾಕ್ಷಿ ವಸಂತ ಭಂಡಾರಿ, ಕಡಬಗೆರೆ. ಶ್ರೀಮತಿ ಜಯಲಕ್ಷ್ಮಿ ಕೃಷ್ಣ ಭಂಡಾರಿ, ಕಡಬಗೆರೆ. ಶ್ರೀಮತಿ ಪ್ರಮೀಳಾ ಕೃಷ್ಣ ಭಂಡಾರಿ, ಮಣಿಪಾಲ್. ತಮ್ಮಂದಿರಾದ ಶ್ರೀ ಪ್ರಭಾಕರ್ ಭಂಡಾರಿ, ಶ್ರೀಮತಿ ರೇಖಾ ಪ್ರಭಾಕರ್ ಭಂಡಾರಿ, ಮಣಿಪಾಲ್. ಶ್ರೀ ಸುಧಾಕರ ಭಂಡಾರಿ, ಶ್ರೀಮತಿ ಅನಿತಾ ಸುಧಾಕರ ಭಂಡಾರಿ, ಹೆಬ್ರಿ.ಪುಟಾಣಿಗಳಾದ ಕಾರ್ತಿಕ್, ಸೌಮ್ಯ, ರಕ್ಷಿತ, ಪ್ರದೀಪ್, ಅನೀಶ್, ಐಶು ಮತ್ತು ಕಡಬಗೆರೆ ಭಂಡಾರಿ ಕುಟುಂಬಸ್ಥರು ಶುಭ ಹಾರೈಸಿದರು .
ಮದುವೆಯ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಗೆ ಶ್ರೀ ದೇವರು ಆಯುರಾರೋಗ್ಯ, ಐಶ್ವರ್ಯವನ್ನಿತ್ತು, ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಿ ಹರಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ ಮದುವೆಯ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
 
-ಭಂಡಾರಿವಾರ್ತೆ

Leave a Reply

Your email address will not be published. Required fields are marked *