September 20, 2024
ಡುಪಿ ತಾಲೂಕು ಕೆಮ್ಮಣ್ಣಿನ ಚಲ್ಲ ಭಂಡಾರಿ ಮತ್ತು ಚಿಕ್ಕಿ ಭಂಡಾರಿಯವರ ಪುತ್ರನಾದ ಶ್ರೀ ರಮೇಶ್ ಭಂಡಾರಿ ಮತ್ತು ಉಡುಪಿ ಎಲ್ಲು ಭಂಡಾರಿ ಮನೆಯ ಶ್ರೀ ವೆಂಕಪ್ಪ ಭಂಡಾರಿ ಮತ್ತು ಕೆಂಜೂರು ಶಾರದ ಭಂಡಾರಿಯವರ ಮಗಳು ಶ್ರೀಮತಿ ಮಾಲತಿ ರಮೇಶ್ ಭಂಡಾರಿ ದಂಪತಿಗಳು,  ಫೆಬ್ರವರಿ 5 ರ ಸೋಮವಾರ ತಮ್ಮ ಮದುವೆಯ ಹತ್ತೊಂಬತ್ತನೆಯ ವರ್ಷದ ವಾರ್ಷಿಕೋತ್ಸವವನ್ನು ಉಡುಪಿ ಕೆಮ್ಮಣ್ಣುವಿನ ತಮ್ಮ ಸ್ವಗೃಹದಲ್ಲಿ ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.
ಈ ಶುಭ ಸಂದರ್ಭದಲ್ಲಿ ಅವರಿಗೆ ತಾಯಿ ಶಾರದ ವೆಂಕಪ್ಪ ಭಂಡಾರಿ, ಮಕ್ಕಳಾದ ರೋಹನ್ ಮತ್ತು ರಷ್ಮಿತಾ, ಅಣ್ಣ-ಅತ್ತಿಗೆಯಂದಿರಾದ ಶ್ರೀ ವಿಠ್ಠಲ ಭಂಡಾರಿ, ಶ್ರೀಮತಿ ಸುಮತಿ ವಿಠ್ಠಲ ಭಂಡಾರಿ, ತನ್ಯ- ಸರೋಜ, ಶ್ರೀ ಜಯ ಭಂಡಾರಿ, ಶ್ರೀಮತಿ ಶಾಂತಾ ಜಯ ಭಂಡಾರಿ, ಶ್ರೀ ಕರುಣಾಕರ ಭಂಡಾರಿ, ಶ್ರೀಮತಿ ಶೋಭಾ ಕರುಣಾಕರ ಭಂಡಾರಿ, ಶ್ರೀ ಮುರಳೀಧರ ಭಂಡಾರಿ, ಶ್ರೀಮತಿ ಶೋಭ ಮುರುಳೀಧರ, ಶ್ರೀ ಕೃಷ್ಣ ಭಂಡಾರಿ ಶ್ರೀಮತಿ ಜಯಂತಿ ಕೃಷ್ಣ ಭಂಡಾರಿ, ವಿನೋದ , ಕೇಶವ,ಹಾಗೂ ಅಪಾರ ಬಂಧುಗಳು, ಸ್ನೇಹಿತರು, ಹಿತೈಷಿಗಳು ಶುಭ ಹಾರೈಸಿದರು.
ಶ್ರೀಮತಿ ಮತ್ತು ಶ್ರೀ ಮಾಲತಿ ರಮೇಶ್ ಭಂಡಾರಿ ದಂಪತಿಗಳು ತಮ್ಮ ವೈವಾಹಿಕ ಜೀವನದ ಸುದೀರ್ಘ ಹತ್ತೊಂಬತ್ತು ವರ್ಷಗಳನ್ನು ಪೂರೈಸಿ ಇಪ್ಪತ್ತನೇ ವರ್ಷಕ್ಕೆ ಕಾಲಿಟ್ಟ ಈ ಶುಭ ಗಳಿಗೆಯಲ್ಲಿ ಅವರಿಗೆ ಶ್ರೀ ದೇವರು ಆಯುರಾರೋಗ್ಯ ಐಶ್ವರ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು  ಭಂಡಾರಿವಾರ್ತೆ ಹೃದಯಪೂರ್ವಕವಾಗಿ ಶುಭ ಹಾರೈಸುತ್ತದೆ.                                                                                                                                     
ವರದಿ:ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *