September 20, 2024
ಉಡುಪಿ ಹಿರಿಯಡ್ಕ ಕಣಂಜಾರು  ದಿವಂಗತ  ಮುತ್ತಯ್ಯ ಭಂಡಾರಿ ಮತ್ತು ದಿವಂಗತ  ಗೀತಾ ಭಂಡಾರಿ  ದಂಪತಿಯ ಪುತ್ರ

ಶ್ರೀ  ಸುಧಾಕರ್ ಭಂಡಾರಿ

ಹಾಗೂ ಮಂಗಳೂರು ತಾಲೂಕು ಉಳೆಪಾಡಿ ಗ್ರಾಮದ ದಿವಂಗತ ಮಹಾಬಲ ಭಂಡಾರಿ ಮತ್ತು  ಸುಂದರಿ ಮಹಾಬಲ ಭಂಡಾರಿ  ದಂಪತಿಯ ಪುತ್ರಿ

ಶ್ರೀಮತಿ ಯಶೋಧ ಸುಧಾಕರ್ ಭಂಡಾರಿ

ದಂಪತಿ ತಮ್ಮ ವೈವಾಹಿಕ ಜೀವನದ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯನ್ನು ಮೇ 23 ರ ಬುಧವಾರ ಸತ್ಯನಾರಾಯಣ ಪೂಜೆಯೊಂದಿಗೆ ಬಂದು ಮಿತ್ರರು ಕುಟುಂಬಸ್ಥರು ಹಾಗೂ MBA ವ್ಯಾಸಂಗ ಮಾಡುತ್ತಿರುವ ಪುತ್ರ ಶ್ರೀ ದೀರಜ್ ಭಂಡಾರಿ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಿಕೊಂಡು ಗುರು ಹಿರಿಯರ ಶುಭಾಶೀರ್ವಾದ ಪಡೆದುಕೊಂಡರು.
ದಾಂಪತ್ಯ ಜೀವನದ ಬೆಳ್ಳಿ ಹಬ್ಬದ ಶುಭ ಸಂದರ್ಭದಲ್ಲಿ ಭಗವಂತನು ಅವರಿಗೆ ಆರೋಗ್ಯ ಆಯುಷ್ಯ ಐಶ್ವರ್ಯ ಸುಖ ಸಂಪತ್ತು ನೀಡಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ”  ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ.

Leave a Reply

Your email address will not be published. Required fields are marked *