September 20, 2024
       
          ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯ ಲಕ್ಷ್ಮೀಪುರದಲ್ಲಿ ಶ್ರೀ ಮಧು ಭಂಡಾರಿ ಮತ್ತು ಶ್ರೀಮತಿ ಮಮತ ಮಧು ಭಂಡಾರಿ ದಂಪತಿಯು ತಮ್ಮ ವೈವಾಹಿಕ ಜೀವನದ ಇಪ್ಪತೈದನೇಯ ವರ್ಷದ ವಾರ್ಷಿಕೋತ್ಸವವನ್ನು  ಜೂನ್ 18 ರ ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
         ಈ ಶುಭ ಸಂದರ್ಭದಲ್ಲಿ ಅವರಿಗೆ ಮಗ ಶ್ರೀ ಶರತ್ ಭಂಡಾರಿ, ಮಗಳು ಶ್ರೀಮತಿ ಶುಭ ಸಂದೇಶ್ ಕುಮಾರ್ ಬಂಗಾಡಿ, ಅಳಿಯ ಶ್ರೀ ಸಂದೇಶ್ ಕುಮಾರ್ ಬಂಗಾಡಿ ಮತ್ತು ಬಂಧುಮಿತ್ರರು ಶುಭ ಕೋರಿದ್ದಾರೆ.
         ದಾಂಪತ್ಯ ಜೀವನದ ಇಪ್ಪತೈದು ವಸಂತಗಳನ್ನು ಪೂರೈಸಿ ಇಪ್ಪತ್ತಾರನೇ ವಸಂತಕ್ಕೆ ಪಾದಾರ್ಪಣೆ ಮಾಡಿದ ದಂಪತಿಯನ್ನು ಶ್ರೀ ದೇವರು ಆಯುರಾರೋಗ್ಯ ಐಶ್ವರ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.’

 

Leave a Reply

Your email address will not be published. Required fields are marked *