September 19, 2024
Advt.

ಸುರತ್ಕಲ್ ಗೋವಿಂದಾಸ್ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಕೃತಿಕ.ಎಸ್‌.ಈ ಬಾರಿ ದ್ವಿತೀಯ ಪಿ.ಯು.ಸಿ .ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 564 (94 %) ಅತ್ಯುತ್ತಮ ಅಂಕವನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಕಾಲೇಜಿನ ಅಧ್ಯಾಪಕ ವೃಂದ ,ಪೋಷಕರು ಹಾಗೂ ಭಂಡಾರಿ ಸಮಾಜದ ಬಂಧುಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಇವರು ಎಸ್‌.ಎಸ್‌.ಎಲ್.ಸಿ.ಪರೀಕ್ಷೆಯಲ್ಲಿಯೂ ಕೂಡ 96 ಪ್ರತಿಶತ ಗರಿಷ್ಠ ಅಂಕ ಪಡೆದಿದ್ದರು.ಕೃತಿಕ ಎಸ್‌.ಸುರತ್ಕಲ್ ಹೊಸಬೆಟ್ಟು ಶ್ರೀ ಸತೀಶ್ ಭಂಡಾರಿ ಮತ್ತು ಶ್ರೀಮತಿ ಸುಚಿತ್ರ ಸತೀಶ್ ಭಂಡಾರಿ ದಂಪತಿಯ ಪುತ್ರಿ, ಅಜ್ಜ ಶ್ರೀ ರಾಘವ ಭಂಡಾರಿ ಕೋಡಕಲ್ ಪಡೀಲ್ ಮಾವ ಶ್ರೀ ಪ್ರವೀಣ್ ಕುಮಾರ್ ಕೋಡಕಲ್ ಪಡೀಲ್ ಮಂಗಳೂರು ,ಅತ್ತೆ ಶ್ರೀಮತಿ ರೇಣುಕಾ ಪ್ರವೀಣ್ ಕೋಡಕಲ್ ಪಡೀಲ್ ಮಂಗಳೂರು ಇವರ ಉತ್ತಮ ಸಾಧನೆಯನ್ನು ಮೆಚ್ಚಿ ಅಭಿನಂದನೆ ಸಲ್ಲಿಸಿದ್ದಾರೆ.

ಕೃತಿಕಾ ತಮ್ಮ ಉನ್ನತ ವ್ಯಾಸಂಗದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಕಾಲೇಜಿಗೂ ಹಾಗೂ ಭಂಡಾರಿ ಸಮಾಜಕ್ಕೂ ಕೀರ್ತಿಯನ್ನು ತರುವ ಬುದ್ಧಿ ಶಕ್ತಿಯನ್ನು ಭಗವಂತ ಕರುಣಿಸಲೆಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.

 

— ಭಂಡಾರಿವಾರ್ತೆ.

Advt.

Leave a Reply

Your email address will not be published. Required fields are marked *