September 19, 2024

ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಶ್ರೀ ಜಗದೀಶ್ ಭಂಡಾರಿ ಮತ್ತು ಶ್ರೀಮತಿ ಮೋಹಿನಿ ಜಗದೀಶ್ ಭಂಡಾರಿ ದಂಪತಿಯು ತಮ್ಮ ವೈವಾಹಿಕ ಜೀವನದ ಮೂವತ್ಮೂರನೇ ವರ್ಷದ ವಾರ್ಷಿಕೋತ್ಸವವನ್ನು ಮೇ 27 ರ ಭಾನುವಾರ ಕುಟುಂಬಸ್ಥರೊಂದಿಗೆ ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.

ಈ ಶುಭ ಸಂದರ್ಭದಲ್ಲಿ ಪುತ್ರ ಶ್ರೀ ಪವನ್ ಕುಮಾರ್,ಸೊಸೆ ಶ್ರೀಮತಿ ಅಕ್ಷತಾ ಪವನ್ ಕುಮಾರ್,ಮೊಮ್ಮಗಳು ಕುಮಾರಿ ತನಿಷ್ಕ ಪವನ್ ಕುಮಾರ್,ದ್ವಿತೀಯ ಪುತ್ರ ಶ್ರೀ  ಪ್ರಣಾಮ್ ಕುಮಾರ್ ಹಾಗೂ ಬಂಧು ಮಿತ್ರರು ಶುಭ ಹಾರೈಸಿದರು.


ಶ್ರೀ ಜಗದೀಶ್ ಭಂಡಾರಿ ಮತ್ತು ಶ್ರೀಮತಿ ಮೋಹಿನಿ ಜಗದೀಶ್ ಭಂಡಾರಿ ದಂಪತಿಯು ತಮ್ಮ ದಾಂಪತ್ಯ ಜೀವನದ ಮೂವತ್ಮೂರು ವಸಂತಗಳನ್ನು ಪೂರೈಸಿ ಮೂವತ್ನಾಲ್ಕನೇ ವಸಂತಕ್ಕೆ ಪಾದಾರ್ಪಣೆ ಮಾಡಿದ ಶುಭ ಗಳಿಗೆಯಲ್ಲಿ ಭಗವಂತನು ಅವರಿಗೆ ಆಯುರಾರೋಗ್ಯವನ್ನು ದಯಪಾಲಿಸಿ ಆಶೀರ್ವದಿಸಲಿ, ಶ್ರೀ ದೇವರ ಕೃಪೆ ಸದಾ ನಿಮ್ಮ ಮೇಲಿರಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.

-ಭಂಡಾರಿವಾರ್ತೆ

Leave a Reply

Your email address will not be published. Required fields are marked *