September 20, 2024
Advt.
ಮೂಡುಬಿದಿರೆ ಜೋಡುಕಟ್ಟೆಯಲ್ಲಿ ಶ್ರೀ ಮಾಧವ ಭಂಡಾರಿ ಮತ್ತು ಶ್ರೀಮತಿ ಶಾರದಾ ಮಾಧವ ಭಂಡಾರಿ ದಂಪತಿಯು ತಮ್ಮ ವೈವಾಹಿಕ ಜೀವನದ ನಲವತ್ತೇಳನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಮೇ 6 ರ ಭಾನುವಾರ ಕುಟುಂಬ ಸದಸ್ಯರೊಂದಿಗೆ ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.
ಈ ಶುಭ ಸಂದರ್ಭದಲ್ಲಿ ಅವರಿಗೆ ಮಕ್ಕಳಾದ ಶ್ರೀ ಯೋಗೀಶ್ ಭಂಡಾರಿ,ಸೊಸೆ ಶ್ರೀಮತಿ ಲತಾ ಯೋಗೀಶ್ ಭಂಡಾರಿ,ಮಗ ಶ್ರೀ ವಿನಯ್ ಕುಮಾರ್ ಭಂಡಾರಿ,ಸೊಸೆ ಶ್ರೀಮತಿ ಅನುಷ್ಕಾ ವಿನಯ್ ಕುಮಾರ್ ಭಂಡಾರಿ,ಮಗಳು ಶ್ರೀಮತಿ ದಿವ್ಯಲತಾ ಶೇಖರ್ ಭಂಡಾರಿ,ಅಳಿಯ ಶ್ರೀ ಶೇಖರ್ ಭಂಡಾರಿ,ಮೊಮ್ಮಕ್ಕಳು,ಬಂಧುಗಳು,ಆತ್ಮೀಯರು ಶುಭ ಕೋರಿದ್ದಾರೆ.
 
ದಾಂಪತ್ಯ ಜೀವನದ ಸುವರ್ಣ ಸಂಭ್ರಮದ ಸನಿಹದಲ್ಲಿರುವ ದಂಪತಿಗೆ ಭಗವಂತನು ಆರೋಗ್ಯ ಭಾಗ್ಯವನ್ನಿತ್ತು ಕಾಪಾಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಆಶಿಸುತ್ತಾ, ಮದುವೆಯ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
Advt.
-ಭಂಡಾರಿವಾರ್ತೆ

Leave a Reply

Your email address will not be published. Required fields are marked *