September 20, 2024
Advt.
ಡುಪಿಯ ಶಿರ್ವ ಮಂಚಕಲ್ ನಲ್ಲಿ ಶ್ರೀ ಬಾಬು ಭಂಡಾರಿ ಮತ್ತು ಶ್ರೀಮತಿ ಜಲಜ ಬಾಬು ಭಂಡಾರಿ ದಂಪತಿಯು ತಮ್ಮ ದಾಂಪತ್ಯ ಜೀವನದ ಐವತ್ತನೇ ವರ್ಷಾಚರಣೆಯ ಸಂಭ್ರಮವನ್ನು ಮೇ 5 ರ ಶನಿವಾರ ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.
ಈ ಸುಸಂದರ್ಭದಲ್ಲಿ ಅವರಿಗೆ ಅವರ ಮಕ್ಕಳಾದ ಶ್ರೀ ದಿನೇಶ್ ಭಂಡಾರಿ,ಶ್ರೀ ನಾಗೇಶ್ ಭಂಡಾರಿ,ಶ್ರೀ ರಾಜೇಶ್ ಭಂಡಾರಿ, ಮಗಳು ಶ್ರೀಮತಿ ಆಶಾ ಸತೀಶ್ ಭಂಡಾರಿ,ಅಳಿಯ ಶ್ರೀ ಸತೀಶ್ ಭಂಡಾರಿ,ಸೊಸೆಯಂದಿರಾದ ಶ್ರೀಮತಿ ಸುಕನ್ಯಾ ದಿನೇಶ್ ಭಂಡಾರಿ,ಶ್ರೀಮತಿ ಸಂಧ್ಯಾ ನಾಗೇಶ್ ಭಂಡಾರಿ,ಶ್ರೀಮತಿ ರಮ್ಯಾ ರಾಜೇಶ್ ಭಂಡಾರಿ,ಮೊಮ್ಮಕ್ಕಳಾದ ಅನನ್ಯ,ದಿಶಾನ್,ಆಯುಷ್,ಯಶಸ್,ಪಂಚಮಿ,ತಕ್ಷ,ಶ್ರೇಯಸ್ ಮತ್ತು ಕುಟುಂಬಸ್ಥರು,ಆತ್ಮೀಯರು,ಹಿತೈಷಿಗಳು ಶುಭ ಹಾರೈಸಿದ್ದಾರೆ.
ದಾಂಪತ್ಯ ಜೀವನದ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಹಿರಿಯರಿಗೆ ಶ್ರೀ ದೇವರು ಆಯುರಾರೋಗ್ಯವನ್ನು ದಯಪಾಲಿಸಿ ನೂರ್ಕಾಲ ಬಾಳುವಂತೆ ಹರಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರೈಸುತ್ತಾ, ಐವತ್ತನೇ ವರ್ಷದ ಮದುವೆಯ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
Advt.
-ಭಂಡಾರಿವಾರ್ತೆ

Leave a Reply

Your email address will not be published. Required fields are marked *