September 20, 2024

ವಿಟ್ಲದ ಕಾಶೀಮಠ ಕೊಪ್ಪಳದಲ್ಲಿ ಶ್ರೀ ಕೃಷ್ಣಪ್ರಸಾದ್ ಭಂಡಾರಿ ಮತ್ತು ಶ್ರೀಮತಿ ಸುಷ್ಮಿತಾ ಕೃಷ್ಣಪ್ರಸಾದ್ ಭಂಡಾರಿ ದಂಪತಿಗಳು ತಮ್ಮ ಮದುವೆಯ ಆರನೆಯ ವರ್ಷದ ವರ್ಷಾಚರಣೆಯನ್ನು ಫೆಬ್ರವರಿ 9 ರ ಶುಕ್ರವಾರ ಮಕ್ಕಳಾದ ಶೋಭಿತ್,ಶೋನಿತ್ ಹಾಗೂ ಕುಟುಂಬಸ್ಥರೊಡಗೂಡಿ ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.


ಈ ಶುಭಸಂದರ್ಭದಲ್ಲಿ ಕೃಷ್ಣಪ್ರಸಾದ್ ರ ತಾಯಿ ಲೀಲಾವತಿ ಸಂಕಪ್ಪ ಭಂಡಾರಿ,ಆಂದ್ರದ ರತ್ನಗಿರಿಯಲ್ಲಿರುವ ಅಕ್ಕ ಶ್ರೀಮತಿ ದೀಪಿಕಾ ದೀಪಕ್ ಭಂಡಾರಿ,ಮೂಡಿಗೆರೆ ನಿಡುವಾಳೆ ಗ್ರಾಮದ ಮಾವ ಶ್ರೀ ಮಂಜುನಾಥ ಭಂಡಾರಿ, ಅತ್ತೆ ಶ್ರೀಮತಿ ಸರೋಜ ಮಂಜುನಾಥ ಭಂಡಾರಿ.ಸುಷ್ಮಿತಾರ ತಂಗಿಯಂದಿರಾದ ಕು.ಶೋಭಿತ,ಕು.ಶುಭ, ಚಿಕ್ಕಪ್ಪ ಜಗನ್ನಾಥ ಭಂಡಾರಿ,ಚಿಕ್ಕಮ್ಮ ಶ್ರೀಮತಿ ಸುಮಿತ್ರಾ ಜಗನ್ನಾಥ ಭಂಡಾರಿ,ಸೋದರ ಮಾವಂದಿರಾದ ಶ್ರೀ ಅಮರನಾಥ ಭಂಡಾರಿ, ಶ್ರೀ ಸತೀಶ್ ಭಂಡಾರಿ ಮತ್ತು ಅಪಾರ ಬಂಧು ಬಳಗದವರು ಶುಭ ಹಾರೈಸಿದ್ದಾರೆ.

 

ಕೃಷ್ಣಪ್ರಸಾದ್ ಮತ್ತು ಸುಷ್ಮಿತಾ ದಂಪತಿಗಳು ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಈ ಶುಭ ಸಂದರ್ಭದಲ್ಲಿ ಭಗವಂತನು ಅವರಿಗೆ ಆಯುರಾರೋಗ್ಯ,ಐಶ್ವರ್ಯ,ಸುಖ,ಶಾಂತಿ, ನೆಮ್ಮದಿ ನೀಡಿಹರಸಿ ಹಾರೈಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.

— ಭಂಡಾರಿವಾರ್ತೆ.

Leave a Reply

Your email address will not be published. Required fields are marked *