September 20, 2024

ಡುಪಿ ಕೋಡಂಕೂರಿನ ಶ್ರೀ ಸಂತೋಷ್ ಭಂಡಾರಿ ಮತ್ತು ಶ್ರೀಮತಿ ದಿವ್ಯ ಸಂತೋಷ್ ಭಂಡಾರಿ ದಂಪತಿಯು ತಮ್ಮ ಮಗ
ಮಾಸ್ಟರ್ ನಿಶ್ಚಿತ್ ಸಂತೋಷ್ ಭಂಡಾರಿಯವರ ಏಳನೇ ವರ್ಷದ ಹುಟ್ಟು ಹಬ್ಬವನ್ನು ಸೆಪ್ಟೆಂಬರ್ 5 ರ ಬುಧವಾರ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಉಡುಪಿಯ ವಾದಿರಾಜ ರಸ್ತೆಯಲ್ಲಿರುವ ಶ್ರೀ ವಿದ್ಯೋದಯ ವಿದ್ಯಾಸಂಸ್ಥೆಯಲ್ಲಿ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ನಿಶ್ಚಿತ್ ಗೆ ಅವರ ತಂದೆ,ತಾಯಿ,ಅಜ್ಜ ಅಜ್ಜಿಯಂದಿರು,ಅತ್ತೆ  ಮಾವಂದಿರು,ಚಿಕ್ಕಪ್ಪಚಿಕ್ಕಮ್ಮಂದಿರು,ಕುಟುಂಬಸ್ಥರು,ಸ್ನೇಹಿತರು,ಆತ್ಮೀಯರು ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಿದ್ದಾರೆ.


ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ನಿಶ್ಚಿತ್ ನಿಗೆ ಶ್ರೀ ದೇವರು ಆಯುರಾರೋಗ್ಯ ಆಯುಷ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃತ್ಪೂರ್ವಕವಾಗಿ ಶುಭ ಕೋರುತ್ತದೆ.

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *