September 20, 2024

ಬಂಟ್ವಾಳ ತಾಲ್ಲೂಕು ವಿಟ್ಲ ನೀರ್ಕಜೆ ಶ್ರೀ ದಿವಂಗತ ಸೋಮಯ್ಯ ಭಂಡಾರಿ ಮತ್ತು ಶ್ರೀಮತಿ ದಿವಂಗತ ಕಾವೇರಿ ಸೋಮಯ್ಯ ಭಂಡಾರಿ ದಂಪತಿಯ ಪುತ್ರ ವಿಟ್ಲ ಗ್ರಾಮದ ಶಿವಾಜಿನಗರ ನಿವಾಸಿ ಶ್ರೀ ಕೃಷ್ಣಪ್ಪ ಭಂಡಾರಿ (62 ವರ್ಷ) ಡಿಸೆಂಬರ್ 13 ನೇ ಆದಿತ್ಯವಾರದಂದು ಮುಂಜಾನೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಹಲವಾರು ವರ್ಷಗಳಲ್ಲಿ ಶ್ರೀ ಮೂಕಾಂಬಿಕಾ ಫೈನಾನ್ಸ್ ವಿಟ್ಲದಲ್ಲಿ ಸೇವೆ ಸಲ್ಲಿಸಿರುತ್ತಾರೆ .

ಬಂಟ್ವಾಳ ಭಂಡಾರಿ ಸಮಾಜ ಸಂಘ ಮತ್ತು ವಿಟ್ಲ ಭಂಡಾರಿ ಸಮಾಜ ಸಂಘದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶ್ರೀಮತಿ ಸುಜಾತ ಇವರ ಪತ್ನಿ .

ಯುರೋಪ್ ದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪುತ್ರ ಗೌರೀಶ್ ಹಾಗೂ ಇಬ್ಬರು ಪುತ್ರಿಯರಾದ ಶ್ರೀಮತಿ ರಶ್ಮಿ ಪ್ರವೀಣ್ ಭಂಡಾರಿ ಬೈಲೂರು ಉಡುಪಿ ಮತ್ತು ಕು ॥ ಪಲ್ಲವಿ ಹಾಗೂ ಬಂಧು ಬಳಗ ಕುಟುಂಬಸ್ಥರನ್ನು ಅಗಲಿದ್ದಾರೆ. ಪುತ್ರ ಯುರೋಪ್ ನಿಂದ ಬಂದ ಬಳಿಕ ಡಿಸೆಂಬರ್ 17 ನೇ ಗುರುವಾರದಂದು ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ವಿಟ್ಲ ಶಿವಾಜಿನಗರದ ಸ್ವಗೃಹ ದಲ್ಲಿ ನಡೆಯಲಿದೆ ಎಂದು ಪುತ್ರಿ ತಿಳಿಸಿದ್ದಾರೆ.


ಕೃಷ್ಣಪ್ಪ ಭಂಡಾರಿಯವರ ಅಗಲುವಿಕೆಯ ಶಕ್ತಿಯನ್ನು ಪತ್ನಿ ಮಕ್ಕಳಿಗೆ ಹಾಗೂ ಕುಟುಂಬಸ್ಥರಿಗೆ ಭಗವಂತನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *