September 20, 2024

ಮಂಗಳೂರು ತಾಲ್ಲೂಕು ಕೋಡಿಕೆರೆ ನಿವಾಸಿ ಶ್ರೀ ರಾಘವ ಭಂಡಾರಿ ಮಂಗಳಪೇಟೆ (74 ವರ್ಷ ) ವಯೋಸಹಜ ಅಸೌಖ್ಯದಿಂದ ಸುರತ್ಕಲ್ ನ ಖಾಸಗಿ ಆಸ್ಪತ್ರೆಯಲ್ಲಿ ಜನವರಿ 20 ನೇ ಬುಧವಾರದಂದು ವಿಧಿವಶರಾದರು.

 ಭಾರತೀಯ ಜನತಾ ಪಕ್ಷದಲ್ಲಿ ಗುರುತಿಸಿಕೊಂಡಿರುವ ಇವರು ಬಾಳ ಮಂಡಲ ಪಂಚಾಯತ್ ನ ಮಾಜಿ ಸದಸ್ಯರಾಗಿ ಮಂಗಳೂರು ಭಂಡಾರಿ ಸಮಾಜ ಸಂಘದ ಮಾಜಿ ಸದಸ್ಯರಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ.ಸಮಾಜದ ಕುಲ ಕಸುಬನ್ನು ಮಾಡುವುದರೊಂದಿಗೆ ಸಿವಿಲ್ ಕಾಂಟ್ರಾಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ .

ಪತ್ನಿ ಶ್ರೀಮತಿ ಸುಲೋಚನಾ ಆರ್ ಭಂಡಾರಿ ಎಂ.ಆರ್. ಪಿ.ಎಲ್. ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪುತ್ರ ವಿವೇಕಾನಂದ ಪುತ್ರಿಯರಾದ ಶ್ರೀಮತಿ ಯಶೋದಾ ಉದಯ ಕುಮಾರ್ ಭಂಡಾರಿ ಉಳ್ಳಾಲ , ಕರ್ಣಾಟಕ ಬ್ಯಾಂಕ್ ಮಂಗಳೂರು ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ಪುಷ್ಪಲತಾ ಸುಧಾಕರ ಭಂಡಾರಿ ಸಚ್ಚರಿಪೇಟೆ ಮತ್ತು ಶ್ರೀಮತಿ ಚಿತ್ರಾಕ್ಷಿ ಅಶೋಕ್ ಭಂಡಾರಿ ಶಿರ್ತಾಡಿ ಮೂಡಬಿದ್ರೆ ಹಾಗೂ ಅಳಿಯಂದಿರು ಸೊಸೆಯಂದಿರು ಮೊಮ್ಮಕ್ಕಳನ್ನು ಅಗಲಿದ್ದಾರೆ.

 ಇವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *