September 20, 2024

ಬಂಟ್ವಾಳ ಬೈಪಾಸ್ ರಸ್ತೆಯ ಅಜೆಕಲ ದಿವಂಗತ ಶ್ರೀ ಸೀನ ಭಂಡಾರಿ ಮತ್ತು ಶ್ರೀಮತಿ ಸರಸ್ವತಿ ದಂಪತಿಯ ಪುತ್ರಿ ಹಾಗೂ ಮಂಗಳೂರು ತಾಲ್ಲೂಕು ಕೈಕಂಬ , ಕಂದಾವರ ಗ್ರಾಮ ಪಂಚಾಯತ್ ಕಚೇರಿ ಸಮೀಪದ ನಿವಾಸಿ ಶ್ರೀ ಜಗದೀಶ್ ಭಂಡಾರಿ ಅವರ ಪತ್ನಿ ಶ್ರೀಮತಿ ಗೀತಾ ಜಗದೀಶ್ ಭಂಡಾರಿ ( 48 ವರ್ಷ ) ಅಲ್ಪಕಾಲದ ಅಸೌಖ್ಯದಿಂದ ಜೂನ್ 2 ನೇ ಬುಧವಾರದಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರೆಳೆದರು.

 ಸದಾ ಲವಲವಿಕೆಯಿಂದ ಎಲ್ಲರೊಂದಿಗೆ ಆತ್ಮೀಯತೆಯಿಂದ ಮಾತನಾಡುತ್ತಾ ಬಂಧುಗಳ ಪ್ರೀತಿಗೆ ಪಾತ್ರರಾಗಿದ್ದರು ಗೀತಾಕ್ಕ.

ತಾಯಿ, ಪತಿ, ಪುತ್ರ ಸ್ವಸ್ತಿಕ್ ಪುತ್ರಿಯರಾದ ಶ್ರೀಮತಿ ಸ್ವಾತಿ ಮತ್ತು ಕು ॥ ಶ್ರುತಿ ಅಳಿಯ ಯೋಗೀಶ್ ಭಂಡಾರಿ ಮೊಮ್ಮಗಳು ಬೇಬಿ ಐಶಾನಿ ಸಹೋದರರಾದ ಸುರೇಶ್ ಭಂಡಾರಿ ಮುಂಬಯಿ ,ಸತೀಶ್ ಭಂಡಾರಿ ಬಂಟ್ವಾಳ ಮತ್ತು ಸುಧಾಕರ ಭಂಡಾರಿ ಬಂಟ್ವಾಳ ಹಾಗೂ ಅಪಾರ ಬಂಧು ಬಳಗ ಕುಟುಂಬಸ್ಥರನ್ನು ಅಗಲಿದ್ದಾರೆ.
 ತಾಯಿ ,ಪತಿ ,ಮಕ್ಕಳು ಮತ್ತು ಸಹೋದರರಿಗೆ ದುಃಖತಪ್ತ ಕುಟುಂಬಕ್ಕೆ ಇವರ ಅಗಲುವಿಕೆಯ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *