September 20, 2024

ಜಾತಿಯೆಂಬ ವಿಷ ಬೀಜ ಬಿತ್ತಿ ಸುತ್ತ
ಒಡೆದು ಆಳಲು ಯತ್ನಿಸಿದರು ಸತತ
ಭಾರತಾಂಬೆಯನು ಮಾಡಿದರು ಸ್ವಂತ

ಮಿತಿಮೀರಿತು ಪರಕೀಯರ ದುಷ್ಕೃತ್ಯ
ಮಾಡುತ್ತ ಹೋರಾಟಗಾರರ ಹತ್ಯ
ಪ್ರಜೆಗಳಿಗಿದು ನುಂಗಲಾರದ ಸತ್ಯ

ಗೆಲ್ಲಲು ಬ್ರಿಟಿಷರು ಮಾಡಿದರು ಕುತಂತ್ರ
ಭಾರತೀಯರದು ಅದನ್ನುಮೀರಿದ ಮಂತ್ರ
ಹೆಣೆದರು ಆಂಗ್ಲರ ವಿರುದ್ಧ ಪ್ರತಿತಂತ್ರ

ಕೊನೆಯುಸಿರಿರುವರೆಗೆ ಹೊರಡುತಾ
ಮರಳಿ ನಿರ್ಮಿಸಿದರು ಭವ್ಯ ಭಾರತ
ಸ್ವತಂತ್ರವೆಂಬ ಗೆಲುವಿನ ಮೆಟ್ಟಿಲು ಏರುತ

ದೇಶಕ್ಕಾಗಿ ನಮ್ಮವರ ಕೊಡುಗೆ ಧೈತ್ಯ
ಹೋರಾಟದಿಂದಲೇ ಆಯ್ತು ಆಂಗ್ಲರ ಅಂತ್ಯ
ದೇಶಕ್ಕಿಂದು ಅಮೃತಮಹೋತ್ಸವದ ಸ್ವಾತಂತ್ರ್ಯ.

ರಚನೆ: ಪ್ರಕೃತಿ ಭಂಡಾರಿ ಆಲಂಕಾರು

Leave a Reply

Your email address will not be published. Required fields are marked *