September 20, 2024

ನಮಗೇಕೆ ಕೀಳರಿಮೆ
ಹೇಳಲು ನಮ್ಮ ದೇಶದ ಹಿರಿಮೆ
ಹೇಳಿ ಹೆಚ್ಚಿಸೋಣ ಅದರ ಗರಿಮೆ

ವೀರ ರಾಜರುಗಳು ನಮ್ಮ ದೇಶವನ್ನಾಳಿದರು
ದೇಶದ ಹಿರಿಮೆಯನ್ನು ಹೆಚ್ಚಿಸಿದರು
ಹೋರಾಡುತ್ತಲೇ ವೀರ ಮರಣವನ್ನಪ್ಪಿದರು

ಗಾಂಧಿ ಬೋಸರಂತ ಮಹಾತ್ಮರು
ನಮಗೆ ಸ್ವಾತಂತ್ರ್ಯವ ತಂದುಕೊಟ್ಟರು
ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಜಿಸಿದರು

ಮಹಿಳಾಮಣಿಗಳು ವೀರವೇಶವಾಗಿ ಹೋರಾಡಿದರು
ಇದರಿಂದಾಗಿ ಆಂಗ್ಲರೇ ಬೆದರಿದರು
ನಮಗೆ ಸ್ವಾತಂತ್ರ್ಯ ಕೊಟ್ಟು ಓಡಿದರು.

ರಚನೆ: ಪ್ರಕೃತಿ ಭಂಡಾರಿ ಆಲಂಕಾರು.

Leave a Reply

Your email address will not be published. Required fields are marked *