September 20, 2024

ತೀರ್ಥಹಳ್ಳಿ ಕೋಣಂದೂರಿನ ಗೋಪಾಲ್ ಕೆ ಎನ್ ಡಿಸೆಂಬರ್ 7 ರ ಮಂಗಳವಾರ  ರಾತ್ರಿ 11 ಗಂಟೆಗೆ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 64 ವರ್ಷ ವಯಸ್ಸಾಗಿತ್ತು.

ಗೋಪಾಲ್ ಕೆ ಎನ್ ರವರು ಕರ್ನಾಟಕ ವಿಧಾನ ಸಭೆಯ ಸೆಕ್ಷನ್ ಆಫೀಸರ್ ಆಗಿ ನಿವೃತ್ತರಾಗಿದ್ದರು .

ಮೃತರು ಪತ್ನಿ ರುಕ್ಮಿಣಿ , ಒಬ್ಬರು ಮಗಳು ಅಮಿತಾ ಜಿ , ಅಳಿಯ ನಿತಿನ್ ಎಂ ಭಂಡಾರಿ , ಮೊಮ್ಮಕ್ಕಳಾದ ಸಮರ್ಥ್ , ಸ್ಮ್ರಿತಿ ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ .

ಕರ್ನಾಟಕ ಸರಕಾರದ ಪರವಾಗಿ ಮಾನ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಮೃತರ ಅಂತ್ಯಸಂಸ್ಕಾರವು ಇಂದು ಮದ್ಯಾಹ್ನ ಬೆಂಗಳೂರಿನ ಸುಮ್ಮನಹಳ್ಳಿ ಚಿತಾಗಾರದಲ್ಲಿ ನಡೆಯಲಿದೆಯೆಂದು ಕುಟುಂಬದ ಮೂಲಗಳಿದ ತಿಳಿದು ಬಂದಿದೆ.

ದಿವಂಗತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಕುಟುಂಬಕ್ಕೆ ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *