September 20, 2024

ಹಾಸನ ಜಿಲ್ಲೆಯ  ವಿದ್ಯಾ ನಗರದ  ಶ್ರೀ ಮಂಜುನಾಥ್ ಹೆಚ್ ಎಸ್ ಮತ್ತು ಶ್ರೀಮತಿ ಶಾಲಿನಿ ಎಂ ದಂಪತಿಯ ಪುತ್ರ ದೀಪ್ ಕಿರಣ್ ಎಂ ರವರು 2021-22 ರ ಎಸ್ ಎಸ್ ಎಲ್ ಸಿ  ಪರೀಕ್ಷೆಯಲ್ಲಿ 605 (96.8%) ಅಂಕಗಳೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗುವುದರೊಂದಿಗೆ  ಗುರುಗಳ ವಿದ್ಯಾಸಂಸ್ಥೆಯ ಊರಿನ ಮತ್ತು ಷೋಷಕರ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ದೀಪ್ ಕಿರಣ್ ಎಂ ಹಾಸನ  ಜಿಲ್ಲೆಯ ವಿದ್ಯಾ ನಗರದ   ಹೋಲಿ ಕ್ರಾಸ್ ಸಿಸ್ಟರ್ಸ್ ಶಾಲೆಯ ವಿದ್ಯಾರ್ಥಿ  , ದೀಪ್ ಕಿರಣ್ ಶಿಕ್ಷಣದಲ್ಲಿ ಇನ್ನಷ್ಟು ದೊಡ್ಡ ಸಾಧನೆ ಮಾಡಲಿ , ಪೋಷಕರಿಗೆ ,ಸಮಾಜಕ್ಕೆ ಹೆಮ್ಮೆ ತರಲಿ, ಇವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

Leave a Reply

Your email address will not be published. Required fields are marked *