September 20, 2024

ಉಡುಪಿ ಜಿಲ್ಲೆಯ ಗುಂಡ್ಮಿ ಚೆಂಪಿಯ ಸುರೇಶ್ ಭಂಡಾರಿ ಮತ್ತು ಶ್ರೀಮತಿ ಅಮೃತ ಕಲಾ ಭಂಡಾರಿಯವರ ಪುತ್ರಿ ಅರ್ಚನಾ ಭಂಡಾರಿ ಇವರು 2021-22 ರ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 579 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ತೇರ್ಗಡೆಯಾಗುವುದರೊಂದಿಗೆ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಅರ್ಚನಾ ಭಂಡಾರಿ ಇವರು ಕೋಟ ವಿವೇಕ ಕಾಲೇಜಿನ ವಿದ್ಯಾರ್ಥಿನಿ. ಅರ್ಚನಾ ಭಂಡಾರಿ ಇವರು ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ದೊಡ್ಡ ಸಾಧನೆ ಮಾಡಲಿ , ಪೋಷಕರಿಗೆ ,ಸಮಾಜಕ್ಕೆ ಹೆಮ್ಮೆ ತರಲಿ, ಇವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

 

Leave a Reply

Your email address will not be published. Required fields are marked *