September 20, 2024

 ಸ್ವಾತಂತ್ರ್ಯ ದಿನಾಚರಣೆ

ಪೀಠಿಕೆ

ಭಾರತವು ಪ್ರತಿವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತದೆ. ಭಾರತವನ್ನು ಬ್ರಿಟಿಷ್
ಆಳ್ವಿಕೆಯಿಂದ ಮುಕ್ತಗೊಳಿಸಲು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ಎಲ್ಲಾ ತ್ಯಾಗಗಳನ್ನು ಸ್ವಾತಂತ್ರ್ಯ ದಿನವೂ ನೆನಪಿಸುತ್ತದೆ.
15 ಆಗಸ್ಟ್ 1947 ರಂದು ಭಾರತವನ್ನು ಬ್ರಿಟಿಷ್ ವಾಸಹಾತುಶಾಹಿಯಿಂದ ಸ್ವತಂತ್ರ ಎಂದು ಘೋಷಿಸಲಾಯಿತು ಮತ್ತು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾಯಿತು.

 

ವಿವರಣೆ :
1947 ರಲ್ಲಿ ಈ ದಿನ ಭಾರತ ಸ್ವತಂತ್ರವಾಯಿತು. ನಾವು ಕಠಿಣ ಹೋರಾಟದ ನಂತರ ಬ್ರಿಟಿಷ್ ಅಧಿಕಾರದಿಂದ ಸ್ವಾತಂತ್ರ್ಯ ಗಳಿಸಿದ್ದೇವೆ. ಈ ದಿನ ಮಧ್ಯರಾತ್ರಿ ಸಮಯದಲ್ಲಿ ನಮ್ಮ ಮೊದಲ ಪ್ರಧಾನಿ ಪಂಡಿತ್ ಜವಾಹಾರ್ಲಾಲ್ ನೆಹರು ಅವರು ಮೊದಲ ಬಾರಿಗೆ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರು. ಇದು ಭಾರತದಲ್ಲಿ 200 ವರ್ಷಗಳಷ್ಟು ಹಳೆಯದಾದ ಬ್ರಿಟಿಷರ ಆಳ್ವಿಕೆಯನ್ನು ಕೊನೆಗೊಳಿಸಿತು. ನಾವು ಈಗ ಮುಕ್ತ ಮತ್ತು ಸಾರ್ವಭೌಮ ರಾಷ್ಟ್ರದಲ್ಲಿ ಗಾಳಿಯನ್ನು ಉಸಿರಾಡುತ್ತೇವೆ.

ಈ ವಿಶೇಷ ಸಂದರ್ಭದಲ್ಲಿ ಭಾರತದ ಜನರು ಭಾರತದ ಸ್ವಾತಂತ್ರ್ಯವನ್ನು ಸಾಧಿಸಲು ಮಹಾನ್ ಪುರುಷರು ಮತ್ತು ಮಹಿಳೆಯರ ನಿಸ್ವಾರ್ಥ ತ್ಯಾಗ ಮತ್ತು ಅಪ್ರತಿಮೆ ಕೊಡುಗೆಗಳನ್ನು ನೆನಪಿಸಿಕೊಳ್ಳುತಾರೆ. ಮಹಾತ್ಮ ಗಾಂಧಿ, ಜವಾಹಾರ್ಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಮೌಲನ ಅಬ್ದುಲ್ ಕಲಾಂ ಅವರ ಅಂತಹ ನಾಯಕರಿಗೆ ದೇಶದಲ್ಲಿ ಎಲ್ಲರೂ ಗೌರವಪೂರ್ವಕ ಗೌರವ ಸಲ್ಲಿಸುತ್ತಾರೆ.

ದೇಶದ ಎಲ್ಲಡೆಯು ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಜನರು ಸಭೆಗಳನ್ನು ನಡೆಸುತ್ತಾರೆ,
ತ್ರಿವರ್ಣ ಧ್ವಜವನ್ನು ಹಾರಿಸುತ್ತಾರೆ ಮತ್ತು ರಾಷ್ಟ್ರಗೀತೆಯನ್ನು ಹಾಡುತ್ತಾರೆ. ಎಲ್ಲರಲ್ಲೂ ಭಾರಿ ಉತ್ಸಾಹ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ದಿನವನ್ನು ಅತ್ಯಂತ ವಿಜೃಂಭಣೆ ಇಂದ ಆಚರಿಸಲಗುತ್ತದೆ. ಎಲ್ಲಾ ನಾಯಕರು ಮತ್ತು ಸಾಮಾನ್ಯ ಜನರು ಕೆಂಪು ಕೋಟೆಯ ಮುಂಭಾಗದ ಪರೇಡ್ ಮೈದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ ಮತ್ತು ಪ್ರಧಾನಿಯ ಆಗಮನಕ್ಕಾಗಿ ಕಾತುರದಿಂದ ಕಾಯುತಿದ್ದಾರೆ.
ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಮತ್ತು ಕಾಲೇಜು ಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಯನ್ನು ಅತ್ಯಂತ ಗೌರವದಿಂದ ಆಚರಿಸಲಾಗುತ್ತದೆ. ವಿದ್ಯಾರ್ಥಿಗಳು ಪರೇಡ್ ಗಳಲ್ಲಿ ಭಾಗವಹಿಸುತ್ತಾರೆ. ರಾಷ್ಟ್ರಧ್ವಜವನ್ನು ಹಾರಿಸುವ ಮೊದಲು ರಾಷ್ಟ್ತ್ರಗೀತೆಯನ್ನು ಹಾಡುತ್ತಾರೆ. ಕೆಲವು ಐತಿಹಾಸಿಕ ಕಟ್ಟಡಗಳನ್ನು ವಿಶೇಷವಾಗಿ ಸ್ವಾತಂತ್ರ್ಯದ ವಿಷಯವನ್ನು ಚಿತ್ರಿಸುವ ದೀಪಗಳಿಂದ ಅಲಂಕರಿಸಲಾಗಿದೆ. ಈ ದಿನ ಗಿಡ ನೆಡುವುದು ಮುಂತಾದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ

ಉಪಸಂಹಾರ :

ಭಾರತವೆಂಬ ಪುಣ್ಯಭೂಮಿಯಲ್ಲಿ ಹುಟ್ಟಿ ಸ್ವಾತಂತ್ರ್ಯದ ಸುಂದರ ವಾತಾವರಣದಲ್ಲಿ ಉಸಿರಾಡಿದ್ದು ನಮ್ಮ ಸೌಭಾಗ್ಯ. ದೇಶಭಕ್ತಿಯು ಪ್ರತಿಯೊಬ್ಬ ನಾಗರೀಕನಲ್ಲೂ ಕಡ್ಡಾಯವಾಗಿರುವ ಪವಿತ್ರಭಾವನೆಯಾಗಿದೆ. ಕೆಲವರು ತಮ್ಮ ಸ್ವಾರ್ಥ ಸಾಧನೆಗಾಗಿ ನಮ್ಮ ಪವಿತ್ರ ದೇಶವನ್ನು ಭ್ರಷ್ಟಾಚಾರದ ನೆಪದಲ್ಲಿ ಮುಚ್ಚಿ ದೇಶದ ಅಮಾಯಕ ಜನರನ್ನು ದಾರಿ ತಪ್ಪಿಸುತಿದ್ದಾರೆ.

✍️  ಪೃಥ್ವಿರಾಜ್ ಪಿ. ಜಿ
8 ನೇ ತರಗತಿ

ಗೊಳಿತಡ್ಕ ಮನೆ, ಪೆರ್ಲಂಪಾಡಿ ಅಂಚೆ, ಕೊಳ್ತಿಗೆ ಗ್ರಾಮ, ಪುತ್ತೂರು ,ದಕ್ಷಿಣ ಕನ್ನಡ

1 thought on “ಸ್ವಾತಂತ್ರ್ಯ ದಿನಾಚರಣೆ-ಪೃಥ್ವಿರಾಜ್ ಪಿ. ಜಿ ಪೆರ್ಲಂಪಾಡಿ

Leave a Reply

Your email address will not be published. Required fields are marked *