September 20, 2024

ಮಂಗಳೂರು ಕದ್ರಿಯ ಮಲ್ಲಿಕಟ್ಟೆ ಚಂದ್ರಶೇಖರ ಭಂಡಾರಿ ಕದ್ರಿಯವರು ಅಕ್ಟೋಬರ್ 8ರ ಭಾನುವಾರ ಮೆದುಳಿನ ರಕ್ತಸ್ರಾವದಿಂದಾಗಿ ಮರಣ ಹೊಂದಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಮೂಲತಃ ಅವರು ಮಂಗಳೂರು ಕದ್ರಿಯ ಮಲ್ಲಿಕಟ್ಟೆಯವರು.ಆದಿ ಉಡುಪಿಯಲ್ಲಿ ತಮ್ಮದೇ ಒಡೆತನದ ರಿಕ್ಷಾ ಗ್ಯಾರೇಜ್ ಹೊಂದಿದ್ದ ಇವರು ಸ್ಥಳೀಯವಾಗಿ ಶೇಖರಣ್ಣ ಎಂದು ಜನಪ್ರಿಯರಾಗಿದ್ದರು. ಪ್ರಸ್ತುತ ಮಣಿಪಾಲದ ರಾಜೀವನಗರದಲ್ಲಿ ವಾಸವಾಗಿದ್ದರು.

ಇವರು ಪತ್ನಿ ಶ್ರೀಮತಿ ಸುಧಾ ಭಂಡಾರಿ, ಮಗ ಪ್ರತೀನ್,ಮಗಳು ಪ್ರತೀಕ್ಷಾ,ಇನ್ನೊಬ್ಬ ಮಗ ಪ್ರತ್ವೀಷ್ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಅವರೆಲ್ಲರಿಗೂ ಅವರ ಅನುಪಸ್ಥಿತಿಯಲ್ಲಿ ಬದುಕಲು ಶಕ್ತಿ, ಮತ್ತು ಸ್ಥೈರ್ಯವನ್ನು ಭಗವಂತನು ದಯಪಾಲಿಸಲಿ.

ಭಗವಂತನಲ್ಲಿ ಲೀನವಾದ ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂಬುದು ಭಂಡಾರಿವಾರ್ತೆ ಯ ಹಂಬಲ.

Leave a Reply

Your email address will not be published. Required fields are marked *