September 20, 2024

ದಿವಂಗತ ಬಾಬು ಭಂಡಾರಿ ಕೈರಂಗಳ ಇವರ ಪತ್ನಿ ರತ್ನ ಭಂಡಾರಿ ಮೂಡಂಬೈಲು ಇವರು ನವಂಬರ್ 30 ರ ಗುರುವಾರ ಮಂಗಳೂರಿನ ಮೇರಿಹಿಲ್ ನಲ್ಲಿರುವ ತನ್ನ ಸಹೋದರಿ ದಿವಂಗತ ಕಮಲ ಭಂಡಾರಿಯವರ ಪುತ್ರ ಶ್ರೀ ಪ್ರವೀಣ್ ಭಂಡಾರಿಯವರ ಮನೆಯಲ್ಲಿ ಹೃದಯಾಘಾತಕ್ಕೊಳಗಾಗಿ ನಿಧನ ಹೊಂದಿದರು.

ಮದುವೆಯಾದ ಸ್ವಲ್ಪ ಸಮಯದಲ್ಲಿಯೇ ತಮ್ಮ ಪತಿಯನ್ನು ಕಳೆದುಕೊಂಡ ಇವರು ಮೂಡಂಬೈಲು ದಿ.ರಾಮಭಂಡಾರಿ ಮತ್ತು ದಿ.ಭಾಗಿ ಭಂಡಾರಿಯವರ ಪುತ್ರಿ.

ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ದುಃಖಿತ ಕುಟುಂಬವರ್ಗದವರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಪ್ರಾರ್ಥಿಸುತ್ತದೆ.

— ಭಂಡಾರಿವಾರ್ತೆ

Leave a Reply

Your email address will not be published. Required fields are marked *