September 20, 2024

ಮುಲ್ಕಿಯ ಕಿಲ್ಪಾಡಿ ಗ್ರಾಮದಲ್ಲಿ ಬೇಸಾಯ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೀವನ ನೆಡೆಸುತ್ತಿದ್ದ ಶ್ರೀ ಸುಧಾಕರ್ ಚಂದು ಭಂಡಾರಿಯವರು ಡಿಸಂಬರ್ 14ರ ತಡರಾತ್ರಿ ವಿಷಪೂರಿತ ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ.ಅವರಿಗೆ ಸುಮಾರು ಅರವತ್ತು ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಸುಜಾತಾ ಭಂಡಾರಿ,ಇಬ್ಬರು ಹೆಣ್ಣು ಮಕ್ಕಳು ಮತ್ತು ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.

ಇವರು ದಿವಂಗತ ಚಂದು ಭಂಡಾರಿ ತಿರುಮಲೆ ಗುತ್ತು ಮತ್ತು ಕಮಲ ಭಂಡಾರಿಯವರ ಮಗ ಹಾಗೂ ಮುಂಬಯಿ ಥಾಣೆಯಲ್ಲಿ ನೆಲೆಸಿರುವ ಶ್ರೀ ಪದ್ಮನಾಭ ಭಂಡಾರಿಯವರ ಅಣ್ಣ.

ಭಗವಂತನು ಇವರ ಪತ್ನಿ, ಮಕ್ಕಳು ಮತ್ತು ಕುಟುಂಬವರ್ಗಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದಯಪಾಲಿಸಲಿ, ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಪ್ರಾರ್ಥಿಸುತ್ತದೆ.

ಭಂಡಾರಿವಾರ್ತೆ

Leave a Reply

Your email address will not be published. Required fields are marked *