September 20, 2024

ಮೂಡಬಿದಿರೆಯಲ್ಲಿ ಬಸ್ ನಿರ್ವಾಹಕರಾಗಿರುವ ಶ್ರೀ ಮಹೇಶ್ ಭಂಡಾರಿ ಮತ್ತು ಶ್ರೀಮತಿ ದೀಪಿಕಾ ಮಹೇಶ್ ಭಂಡಾರಿ ದಂಪತಿಗಳ ಪುತ್ರ ಮಾ.ಪ್ರದ್ಯುಮ್ನನ ಎರಡನೇ ವರ್ಷದ ಹುಟ್ಟು ಹಬ್ಬವನ್ನು ಡಿಸೆಂಬರ್ 25 ರ ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಈ ಶುಭ ಸಂದರ್ಭದಲ್ಲಿ ಹುಟ್ಟು ಹಬ್ಬದ ಶುಭಾಶಯ ಕೋರಿದವರು ತಂದೆತಾಯಿಗಳು, ಅಜ್ಜ ಶ್ರೀ ಪ್ರಭಾಕರ ಭಂಡಾರಿ ಅಜ್ಜಿ ಶ್ರೀಮತಿ ವಸಂತಿ ಪ್ರಭಾಕರ್ ಭಂಡಾರಿ,ಚಾವಡಿಬೈಲ್ ವರ್ಕಾಡಿಯಲ್ಲಿರುವ ಅಜ್ಜ ಶ್ರೀ ಧರ್ಮರಾಜ್ ಭಂಡಾರಿ ಅಜ್ಜಿ ಶ್ರೀಮತಿ ಮೂಕಾಂಬಿಕಾ ಧರ್ಮರಾಜ್ ಭಂಡಾರಿ,ಮಂಗಳೂರಿನಲ್ಲಿರುವ ಚಿಕ್ಕಪ್ಪ ಶ್ರೀ ನಟೇಶ್ ಭಂಡಾರಿ ಚಿಕ್ಕಮ್ಮ ಶ್ರೀಮತಿ ಸುರೇಖಾ ನಟೇಶ್ ಭಂಡಾರಿ, ಬೆಂಗಳೂರಿನಲ್ಲಿರುವ ಅತ್ತೆ ಶ್ರೀಮತಿ ನಮಿತಾ ಮಹದೇವ್ ಭಂಡಾರಿ ಮಾವ ಶ್ರೀ ಮಹಾದೇವ್ ಭಂಡಾರಿ ಹಾಗೂ ಕುಟುಂಬದವರು.

ಭಗವಂತನು ಪ್ರದ್ಯುಮ್ನ ನಿಗೆ ಆಯುರಾರೋಗ್ಯ ಭಾಗ್ಯ ನೀಡಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.

ಭಂಡಾರಿವಾರ್ತೆ

Leave a Reply

Your email address will not be published. Required fields are marked *