September 20, 2024

   ಮೂಲ್ಕಿಯ ಚಿತ್ರಾಪುವಿನ ಕೊಲ್ವಾಡು ಶ್ರೀ ಆನಂದ ಭಂಡಾರಿಯವರು ವಯೋಸಹಜ ಅನಾರೋಗ್ಯದಿಂದ ಜನವರಿ 6 ನೇ ಶನಿವಾರ ರಾತ್ರಿ 8:45 ಕ್ಕೆ ನಿಧನ ಹೊಂದಿದರು.ಅವರಿಗೆ 72 ವರ್ಷ ವಯಸ್ಸಾಗಿತ್ತು.

ಹಲವು ವರ್ಷಗಳಿಂದ ಮುಂಬಯಿಯ ಮುಕುಂದ ಐರನ್ ಕಂಪನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದ ಇವರು ಅನಾರೋಗ್ಯ ನಿಮಿತ್ತ ಊರಿಗೆ ಬಂದು ಮಂಗಳೂರು ಕೋಡಿಕಲ್ ನಲ್ಲಿರುವ ಅಳಿಯನ ಮನೆಯಲ್ಲಿ ಉಳಿದು ಚಿಕಿತ್ಸೆ ಪಡೆಯುತ್ತಿದ್ದರು, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
ಮೃತರು ಪತ್ನಿ ಶ್ರೀಮತಿ ಗೀತಾ ಆನಂದ ಭಂಡಾರಿ, ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಗೀತಾ ಆನಂದ ಭಂಡಾರಿಯವರು ಕಾರ್ಕಳ ಬೆಟ್ಟದಮನೆ ಶ್ರೀ ಗೋಪಾಲ ಭಂಡಾರಿ ಮತ್ತು ಕಾರ್ಕಳ ಶ್ರೀ ಶೇಖರ್ ಭಂಡಾರಿಯವರ ಸಹೋದರಿ.

ಆನಂದ ಭಂಡಾರಿಯವರ ಅಂತ್ಯಕ್ರಿಯೆ ಜನವರಿ 7 ರ ಭಾನುವಾರ ಬೆಳಿಗ್ಗೆ 10:30 ಕ್ಕೆ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪತ್ನಿ, ಮಕ್ಕಳು ಮತ್ತು ಕುಟುಂಬ ವರ್ಗದವರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಮತ್ತು ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಪ್ರಾರ್ಥಿಸುತ್ತದೆ.

ಭಂಡಾರಿವಾರ್ತೆ.

Leave a Reply

Your email address will not be published. Required fields are marked *