September 20, 2024

ಪುತ್ತೂರಿನ ಶ್ರೀ ಬಾಲಕೃಷ್ಣ ಭಂಡಾರಿ ಮತ್ತು ಶ್ರೀಮತಿ ಜಯಶ್ರೀ ಬಾಲಕೃಷ್ಣ ಭಂಡಾರಿ ದಂಪತಿಗಳು ಪುತ್ತೂರಿನ ಉರ್ಲಾಂಡಿ ಎಂಬಲ್ಲಿ ನೂತನವಾಗಿ ನಿರ್ಮಿಸಿದ ತಮ್ಮ ಮನೆ ಪ್ರತೀಕ್ ನಿಲಯ ದ ಗೃಹಪ್ರವೇಶವನ್ನು ಫೆಬ್ರವರಿ 9 ರ ಶುಕ್ರವಾರ ಶ್ರೀ ಗಣಪತಿ ಹೋಮ ಮತ್ತು ಲಕ್ಷ್ಮೀಸಹಿತ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ನೆರವೇರಿಸಿದರು.

ನೂತನ ಗೃಹಪ್ರವೇಶ ಸಮಾರಂಭದಲ್ಲಿ ಉಪಸ್ಥಿತರಿದ್ದ ನೂರಾರು ಭಂಡಾರಿ ಬಂಧುಗಳು,ಹಿತೈಷಿಗಳು, ಸ್ನೇಹಿತರು ಶ್ರೀ ಬಾಲಕೃಷ್ಣ ಭಂಡಾರಿ, ಶ್ರೀಮತಿ ಜಯಶ್ರೀ ಬಾಲಕೃಷ್ಣ ಭಂಡಾರಿ, ಮಕ್ಕಳಾದ ಕುಮಾರಿ ಪ್ರಾಪ್ತಿ,ಕುಮಾರ ಪ್ರತೀಕ್ ಮತ್ತು ಬಾಲಕೃಷ್ಣ ಭಂಡಾರಿಯವರ ತಾಯಿ ಶ್ರೀಮತಿ ವಾರಿಜ ಭಂಡಾರಿಯವರಿಗೆ ಶುಭ ಹಾರೈಸಿ ಯಥೋಚಿತ ಸತ್ಕಾರವನ್ನು ಸ್ವೀಕರಿಸಿ ಹರಸಿದರು.

ನೂತನವಾಗಿ ನಿರ್ಮಿಸಿದ ನಿಮ್ಮ ಮನೆಯಲ್ಲಿ ಅಷ್ಠಲಕ್ಚ್ಮಿಯರು ನೆಲೆಸಲಿ,ಧನಕನಕಾದಿ ಸಂಪತ್ತು, ಅಷ್ಟೈಶ್ವರ್ಯಗಳೂ,ಶಾಂತಿ, ನೆಮ್ಮದಿ ತುಂಬಿರಲಿ ಎಂದು ಭಂಡಾರಿ ಕುಟುಂಬ ದ ಮನೆಮನದ ಮಾತು ಭಂಡಾರಿವಾರ್ತೆ ಮನಃಪೂರ್ವಕ ಶುಭ ಕೋರುತ್ತದೆ.

ವರದಿ:ಭಾಸ್ಕರ್ ಭಂಡಾರಿ ಶಿರಾಳಕೊಪ್ಪ. 

Leave a Reply

Your email address will not be published. Required fields are marked *