September 20, 2024

ಮಡಂತ್ಯಾರು ಶ್ರೀ ಅಶೋಕ್ ಭಂಡಾರಿ ಮತ್ತು ಶ್ರೀಮತಿ ಅಮಿತಾ ಅಶೋಕ್ ಭಂಡಾರಿ ದಂಪತಿಗಳ ಪುತ್ರ ಮಾಸ್ಟರ್ ಗುರುಪ್ರೀತ್ ಅಶೋಕ್ ಭಂಡಾರಿಯವರ ಆರನೇ ವರ್ಷದ ಹುಟ್ಟಿದ ಹಬ್ಬವನ್ನು ಫೆಬ್ರವರಿ 21ರ ಬುಧವಾರ ಮಡಂತ್ಯಾರು ಗುಂಡಿಯಳಿಕೆಯ “ಶ್ರೀ ಗುರುಪ್ರೀತ್ ನಿಲಯ” ದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಈ ಶುಭ ಸಂದರ್ಭದಲ್ಲಿ ತಂದೆ, ತಾಯಿ,ಅಜ್ಜ,ಅಜ್ಜಿ,ದೊಡ್ಡಪ್ಪ ದೊಡ್ಡಮ್ಮಂದಿರು,ಚಿಕ್ಕಪ್ಪ ಚಿಕ್ಕಮ್ಮಂದಿರು, ಅತ್ತೆ ಮಾವಂದಿರು ಹಾಗೂ ಮಡಂತ್ಯಾರು ,ಕಿನ್ನಿಗೋಳಿ ಪಕ್ಷಿಕೆರೆಯ ಭಂಡಾರಿ ಕುಟುಂಬಸ್ಥರು ಶುಭ ಹಾರೈಸಿದ್ದಾರೆ.

 

ಮಾಸ್ಟರ್ ಗುರುಪ್ರೀತ್ ಹುಟ್ಟು ಹಬ್ಬವನ್ನಾಚರಿಸಿಕೊಳ್ಳುತ್ತಿರುವ ಈ ಶುಭ ಗಳಿಗೆಯಲ್ಲಿ ಭಗವಂತನು ಅವರಿಗೆ ಆಯುರಾರೋಗ್ಯ ನೀಡಿ ಸುಖಸಂತೋಷದಿಂದ ಬಾಳುವಂತೆ ಹರಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಹೃತ್ಪೂರ್ವಕವಾಗಿ ಹಾರೈಸುತ್ತದೆ.

ಭಂಡಾರಿವಾರ್ತೆ

Leave a Reply

Your email address will not be published. Required fields are marked *