September 20, 2024
ಫೆಬ್ರವರಿ 24 ರ ಶನಿವಾರ ಬೆಂಗಳೂರಿನ ನಾಯಂಡನಹಳ್ಳಿ ವಿನಾಯಕ ಲೇಔಟ್ ನಿವಾಸಿಗಳಾದ ಶ್ರೀ ಹರೀಶ್ ಭಂಡಾರಿ ಮತ್ತು ಶ್ರೀಮತಿ ಅನಿತಾ ಹರೀಶ್ ಭಂಡಾರಿ ದಂಪತಿಗಳ ಮುದ್ದಿನ ಮಗ ಮಾಸ್ಟರ್ ಮನೀಶ್ ಹರೀಶ್ ಭಂಡಾರಿ ತನ್ನ ಎಂಟನೇ ವರ್ಷದ ಹುಟ್ಟು ಹಬ್ಬವನ್ನು  ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಅವರಿಗೆ ತಂದೆ, ತಾಯಿ, ಕಡಬುಗೆರೆಯ ಅಜ್ಜ ಶ್ರೀ ವಸಂತ ಭಂಡಾರಿ, ಅಜ್ಜಿ ಶ್ರೀ ಮೀನಾಕ್ಷಿ ವಸಂತ ಭಂಡಾರಿ, ಕುಂಟಾಡಿಯ ಅಜ್ಜಿ ಚಂದ್ರಾವತಿ, ಮಸ್ಕತ್ ನಲ್ಲಿರುವ ಮಾವ ಶ್ರೀ ಅನಿಲ್ ಭಂಡಾರಿ, ಅತ್ತೆ ಶ್ರೀಮತಿ ಚೇತನ ಅನಿಲ್ ಭಂಡಾರಿ, ಚಿಕ್ಕಪ್ಪ ಮೂಡುಬಿದಿರೆಯ ಶ್ರೀ ಗಿರಿಧರ್ ಭಂಡಾರಿ, ಚಿಕ್ಕಮ್ಮ ಶ್ರೀಮತಿ ಅಮಿತ ಗಿರಿಧರ್ ಭಂಡಾರಿ, ಮಾಸ್ಟರ್ ದೇವಿಕ, ಧನ್ವಿತ್, ಅನ್ವಿತ್ ಮತ್ತು ಕುಟುಂಬ ವರ್ಗದವರು ಶುಭ ಹಾರೈಸಿದ್ದಾರೆ.
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಮಾಸ್ಟರ್ ಮನೀಶ್ ಗೆ ಭಗವಂತನು ಆಯುರಾರೋಗ್ಯ ಭಾಗ್ಯ ನೀಡಲಿ, ಶ್ರೀ ಶಾರದಾಂಬೆ ಸಕಲ ಸದ್ಭುದ್ದಿಗಳನ್ನು ನೀಡಿ ಹರಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ.

Leave a Reply

Your email address will not be published. Required fields are marked *