September 20, 2024

ಮೂಡಬಿದಿರೆ ಸುಂದರನಾಥ್ ಭಂಡಾರಿ ಇವರು ದಿನಾಂಕ 24/2/2018 ಶನಿವಾರ  ರಾತ್ರಿ  ಮಂಗಳೂರಿನ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ  ನಿಧನರಾದರು. ಇವರಿಗೆ 78 ವರ್ಷ ವಯಸ್ಸಾಗಿತ್ತು . ಮೂಡಬಿದ್ರೆ ಅಲಂಗಾರು ಸಮೀಪ ನಡೆದ ಆಕಸ್ಮಿಕ ಅಪಘಾತ ಬಳಿಕ ಆಸ್ಪತ್ರೆಗೆ  ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ರಾತ್ರಿ ನಿಧನರಾದರು. 

ಶಿಕ್ಷಣ ಇಲಾಖೆಯಲ್ಲಿ 32 ವರ್ಷಗಳ ಕಾಲ ಸಹ ಶಿಕ್ಷಕರಾಗಿ ಹಾಗೂ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ  ನಿವೃತ್ತ ರಾಗಿದ್ದರು  ಮೂಲತಃ  ಮೂಡಬಿದ್ರೆ ತೋಡಾರಿನವರು ಪ್ರಸ್ತುತ ಅಲಂಗಾರು ಬಸವನಕಜೆ ಬಳಿ ಪತ್ನಿ ವಸಂತಿ ಮತ್ತು ಪುತ್ರಿ ಜೊತೆ ವಾಸವಾಗಿದ್ದಾರೆ ಇವರ ನಿಧನಕ್ಕೆ ಭಂಡಾರಿ ಸಮಾಜದ ಮನೆ ಮನದ ಮಾತಾಗಿರುವ ಭಂಡಾರಿ ವಾರ್ತೆಯು  ಪತ್ನಿ ಪುತ್ರಿ ಹಾಗೂ ಕುಟುಂಬಸ್ಥರಿಗೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸುತ್ತದೆ .

 

 

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *