September 20, 2024
ಬಾಳೆಹೊನ್ನೂರು ಶಾಂತಿನಗರದ ಶ್ರೀ ಎಸ್. ಮೋಹನ್ ಭಂಡಾರಿ ಮತ್ತು ಶ್ರೀಮತಿ ರಮಾ.ಎಸ್.ಮೋಹನ್ ಭಂಡಾರಿ ದಂಪತಿಗಳು ಮಾರ್ಚ್ 21 ರ ಬುಧವಾರ ತಮ್ಮ ಮದುವೆಯ ಮೂವತ್ತೈದನೇಯ ವರ್ಷದ ವಾರ್ಷಿಕೋತ್ಸವವನ್ನು ಬಂಧು ಬಾಂಧವರೊಡಗೂಡಿ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿ ಮಗ ಶ್ರೀ ಸುಭಾಶ್ಚಂದ್ರ ಭಂಡಾರಿ, ಸೊಸೆ ಶ್ರೀಮತಿ ಡಾ|| ಶೃತಿ ಸುಭಾಶ್ಚಂದ್ರ ಭಂಡಾರಿ, ಮೊಮ್ಮಗಳು ಬೇಬಿ ಸ್ಮಯ, ದ್ವಿತೀಯ ಪುತ್ರ ಶ್ರೀ ಸುರೇಶ್ಚಂದ್ರ ಭಂಡಾರಿ, ಮೂಡಿಗೆರೆಯ ಬಂಧುಗಳಾದ ಶ್ರೀ ಷಣ್ಮುಖಾನಂದ ಭಂಡಾರಿ, ಶ್ರೀಮತಿ ವನಿತಾ ಷಣ್ಮುಖಾನಂದ ಭಂಡಾರಿ, ಶ್ರೀ ಭರತ್ ಷಣ್ಮುಖಾನಂದ ಭಂಡಾರಿ ,ಬಂಧು ಬಾಂಧವರು,ಹಿತೈಷಿಗಳು ಶುಭ ಹಾರೈಸಿದ್ದಾರೆ.
ಭಂಡಾರಿ ಸಮಾಜದಲ್ಲಿ ಜನಾನುರಾಗಿಯಾಗಿ, ಅಜಾತಶತ್ರುವಾಗಿ ಗುರುತಿಸಿಕೊಂಡಿರುವ ಶ್ರೀ ಮೋಹನ್ ಭಂಡಾರಿಯವರು ಮತ್ತು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಶ್ರೀಮತಿ ರಮಾ ಮೋಹನ್ ಭಂಡಾರಿಯವರು ತಮ್ಮ ಮದುವೆಯ ಮೂವತ್ತೈದು ವಸಂತಗಳನ್ನು ಪೂರೈಸಿ ಮೂವತ್ತಾರಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಶುಭ ಗಳಿಗೆಯಲ್ಲಿ ಶ್ರೀ ದೇವರು ಅವರಿಗೆ ಆಯುರಾರೋಗ್ಯ ಐಶ್ವರ್ಯ ಕರುಣಿಸಿ, ಸುಖ ಶಾಂತಿ ನೆಮ್ಮದಿಯುತ ಜೀವನ ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಹಾರೈಸುತ್ತಾ, ವಿವಾಹ ವಾರ್ಷಿಕೋತ್ಸವದ ಹಾರ್ದಿಕ  ಶುಭಾಶಯಗಳನ್ನು ಕೋರುತ್ತದೆ.
ವರದಿ:ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *