September 20, 2024
ಮಾರ್ಚ್ 24 ರ ಶನಿವಾರ ಉಡುಪಿ ತಾಲೂಕಿನ ಉಪ್ಪೂರು ಗ್ರಾಮದಲ್ಲಿ ಶ್ರೀ ಆನಂದ ಭಂಡಾರಿ ಮತ್ತು ಶ್ರೀಮತಿ ಭಾರತಿ ಆನಂದ ಭಂಡಾರಿ ದಂಪತಿಗಳು ತಮ್ಮ ದಾಂಪತ್ಯ ಜೀವನದ 30 ನೇ ವರ್ಷದ ಸಂಭ್ರಮಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ. 
ಈ ಶುಭ ಸಂದರ್ಭದಲ್ಲಿ ಪುತ್ರಿ  ಶ್ರೀಮತಿ ರಮ್ಯಾಶ್ರೀ , ಪುತ್ರ ಶ್ರೀ ರಾಹುಲ್ , ಅಳಿಯ ಶ್ರೀ ಶ್ರೀಕಾಂತ್ .ಹೆಚ್.ಟಿ. ಮೊಮ್ಮಗಳಾದ  ಶ್ರೀಯಂಶಿ  ಹಾಗೂ ಬಂಧುಮಿತ್ರರು, ಹಿತೈಷಿಗಳು ಶುಭ  ಹಾರೈಸಿದ್ದಾರೆ. 
ಶ್ರೀ ಆನಂದ್ ಭಂಡಾರಿಯವರು ದುಬೈ ರಾಷ್ಟ್ರದಲ್ಲಿ 25 ವರ್ಷ ಸರಕಾರಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಉಪ್ಪೂರಿನಲ್ಲಿ ತಮ್ಮ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಇವರ ದಾಂಪತ್ಯ ಜೀವನದ ವಿಶೇಷತೆಯೆಂದರೆ  ಇಂದೇ  ಇವರ ಪುತ್ರಿ ಶ್ರೀಮತಿ ರಮ್ಯಾಶ್ರೀಯವರು ಕೂಡ ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿದ್ದಾರೆ.
ಈ ಶುಭ ಸಂದರ್ಭದಲ್ಲಿ ಭಗವಂತನು ಶ್ರೀ ಅನಂದ ಭಂಡಾರಿ ಮತ್ತು ಶ್ರೀಮತಿ ಭಾರತಿ ಆನಂದ ಭಂಡಾರಿ ದಂಪತಿಗಳಿಗೆ ಹಾಗೂ ಪುತ್ರಿ  ಶ್ರೀಮತಿ ರಮ್ಯಾಶ್ರೀ  ಯವರಿಗೆ ಆಯುರಾರೋಗ್ಯ ಭಾಗ್ಯ ನೀಡಿ, ಸುಖ ಸಂಪತ್ತು ನೆಮ್ಮದಿಯ ಜೀವನ ನಡೆಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಯು ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ

Leave a Reply

Your email address will not be published. Required fields are marked *