September 20, 2024
ಕಾರ್ಕಳ ಗುಂಡಾಜೆಯ ಶ್ರೀಮತಿ ವಾರಿಜ ಮತ್ತು ಕೃಷ್ಣಪ್ಪ ಭಂಡಾರಿಯವರ ಪುತ್ರ,

ಚಿ|| ಪ್ರವೀಣ್ ಎಂ. ಕೆ 

       
ಮತ್ತು 
ಕಾಂಜಳಿಕೆ ಶ್ರೀ ಕೃಷ್ಣಪ್ಪ‌ ಭಂಡಾರಿ ಮತ್ತು ಶ್ರೀಮತಿ ರೇವತಿ ಭಂಡಾರಿಯವರ ಪುತ್ರಿ, 

ಚಿ.ಸೌ|| ಚೈತನ್ಯ (ಲಕ್ಷ್ಮೀ) 

ಇವರ ವಿವಾಹವು ಗುರು ಹಿರಿಯರ ಮತ್ತು ಬಂಧು ಮಿತ್ರರ ಸಮ್ಮುಖದಲ್ಲಿ ಕಾರ್ಕಳದ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ವೈಭವೊಪೇತವಾಗಿ ದಿನಾಂಕ 20-04-2018 ರ ಶುಭದಿನದಂದು ನೆರವೇರಿತು. 
ವಿಜೃಂಭಣೆಯಿಂದ ನಡೆದ ವಿವಾಹ ಸಂಭ್ರಮದಲ್ಲಿ ನವ ದಂಪತಿಗಳನ್ನು ಆಶೀರ್ವದಿಸಲು ಗಣ್ಯ ಅತಿಥಿಗಳು, ಹಿತೈಷಿಗಳು ಮತ್ತು ಎಲ್ಲ ಬಂಧುಮಿತ್ರರು ಆಗಮಿಸಿ ,ಉಪಸ್ಥಿತರಿದ್ದು ಶುಭ ಹಾರೈಸಿದರು. 
ಈ ಶುಭ ಸಂದರ್ಭದಲ್ಲಿ ಸಂಭ್ರಮದಲ್ಲಿರುವ ನವ ಜೋಡಿಗೆ ಶುಭ ಹಾರೈಸುತ್ತಾ, ಭವಿಷ್ಯದಲ್ಲಿ ಸುಖಮಯ ಮತ್ತು ಸಂತೃಪ್ತ ಜೀವನ ದೊರೆಯಲಿ ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಶ್ರೀ ದೇವರಲ್ಲಿ ಬೇಡುತ್ತದೆ.                                              
-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *