September 20, 2024

 

ಭಂಡಾರಿ ವಾರ್ತೆ ತಂಡದ ಸಕ್ರಿಯ ಸದಸ್ಯ ಮಂಜೇಶ್ವರ ಪಾವೂರಿನ ಶ್ರೀ ಪ್ರಕಾಶ್ ಭಂಡಾರಿ ಮತ್ತು ಕಾರ್ಕಳ ಕಾಬೆಟ್ಟುವಿನ ಶ್ರೀಮತಿ ಅಶ್ವಿನಿ ಪ್ರಕಾಶ್ ದಂಪತಿಯು ಏಪ್ರಿಲ್ 28 ರ ಶನಿವಾರ ತಮ್ಮ ಮದುವೆಯ ಐದನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಮಗ ಪ್ರಶಸ್ತ್ ಮಂಜೇಶ್ವರರೊಂದಿಗೆ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

 

ಮದುವೆಯ ವಾರ್ಷಿಕೋತ್ಸವದ ಸವಿನೆನಪಿಗಾಗಿ ಕಚ್ಚೂರು, ಕೊಲ್ಲೂರು,ಮುರುಡೇಶ್ವರ ಮುಂತಾದ ಧಾರ್ಮಿಕ ಕ್ಷೇತ್ರಗಳ ದರ್ಶನದಲ್ಲಿರುವ ದಂಪತಿಗೆ ಮಂಜೇಶ್ವರ ಪಾವೂರು ಭಂಡಾರಿ ಕುಟುಂಬಸ್ಥರು, ಕಾರ್ಕಳ ಕಾಬೆಟ್ಟು ಭಂಡಾರಿ ಕುಟುಂಬಸ್ಥರು, ಭಂಡಾರಿ ವಾರ್ತೆ ತಂಡದ ಸರ್ವ ಸದಸ್ಯರು, ಹಿತೈಷಿಗಳು ಶುಭ ಕೋರುತ್ತಿದ್ದಾರೆ.

ಮದುವೆಯ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಗೆ ಶ್ರೀ ದೇವರು ಆಯುರಾರೋಗ್ಯ, ಐಶ್ವರ್ಯವನ್ನಿತ್ತು, ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಿ ಹರಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ ಮದುವೆಯ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.

 

 

-ಭಂಡಾರಿವಾರ್ತೆ

Leave a Reply

Your email address will not be published. Required fields are marked *