September 20, 2024

ಉಡುಪಿ ತಾಲೂಕು ಕೆಂಜೂರಿನ ದಿ.ವೆಂಕಪ್ಪ ಭಂಡಾರಿ ಮತ್ತು ಶಾರದ ವೆಂಕಪ್ಪ ಭಂಡಾರಿಯವರ ಪುತ್ರನಾದ ಶ್ರೀ ಮುರಳೀಧರ್ ಭಂಡಾರಿ ಮತ್ತು ಕೊಕ್ಕರ್ಣೆ ಕೃಷ್ಣ ಭಂಡಾರಿ ಮತ್ತು ಗೀತಾ ಕ್ರಷ್ಣ ಭಂಡಾರಿಯವರ ಮಗಳು ಶ್ರೀಮತಿ ಶೋಭ ಮುರಳೀಧರ್ ಭಂಡಾರಿ ದಂಪತಿಗಳು,ಎಪ್ರಿಲ್ 29 ರ ಭಾನುವಾರ ತಮ್ಮ ಮದುವೆಯ ಹತ್ತೊಂಬತ್ತನೆಯ ವರ್ಷದ ವಾರ್ಷಿಕೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.

 

ಈ ಶುಭ ಸಂದರ್ಭದಲ್ಲಿ ಅವರಿಗೆ ತಾಯಿ ಶಾರದ ವೆಂಕಪ್ಪ ಭಂಡಾರಿ, ಮಕ್ಕಳಾದ ಪ್ರತಿಕ್ಷಾ ಮತ್ತು ಪ್ರೀತಮ್, ಅಣ್ಣ-ಅತ್ತಿಗೆ, ಶ್ರೀ ಕರುಣಾಕರ ಭಂಡಾರಿ ಮತ್ತು ಶ್ರೀಮತಿ ಶೋಭಾ ಕರುಣಾಕರ ಭಂಡಾರಿ, ಅಕ್ಕ-ಭಾವಂದಿರಾದ ಶ್ರೀ ಶೇಖರ ಭಂಡಾರಿ ಮತ್ತು ಮಮತಾ ಶೇಖರ್, ಶ್ರೀ ಕೃಷ್ಣ ಭಂಡಾರಿ ಮತ್ತು ಶ್ರೀಮತಿ ಜಯಂತಿ ಕೃಷ್ಣ ಭಂಡಾರಿ, ಶ್ರೀ ಕೇಶವ ಭಂಡಾರಿ ಮತ್ತು ವಿನೋದ ಕೇಶವ,ಶಿವರಾಮ ಭಂಡಾರಿ ಮತ್ತು ಜ್ಯೋತಿ ಶಿವರಾಮ,ತಂಗಿ ಮಾಲತಿ ರಮೇಶ್ ಮತ್ತು ಶ್ರೀ ರಮೇಶ್ ಭಂಡಾರಿ ಹಾಗೂ ಅಪಾರ ಬಂಧುಗಳು, ಸ್ನೇಹಿತರು, ಹಿತೈಷಿಗಳು ಶುಭ ಹಾರೈಸಿದರು.

 

ಮುರುಳೀಧರ ಭಂಡಾರಿ ಮತ್ತು ಶೋಭಾ ಮುರುಳೀಧರ ಭಂಡಾರಿ ದಂಪತಿಯ ದಾಂಪತ್ಯ ಜೀವನಕ್ಕೀಗ ಹತ್ತೊಂಬತ್ತರ ತುಂಬು ಹರೆಯ.ಈ ಶುಭ ಗಳಿಗೆಯಲ್ಲಿ ಭಗವಂತನು ದಂಪತಿಗೆ ಆಯುರಾರೋಗ್ಯ,ಐಶ್ವರ್ಯಗಳನ್ನು ದಯಪಾಲಿಸಿ ಸಕಲ ಸನ್ಮಂಗಳವನ್ನುಂಟು ಮಾಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ ಮದುವೆಯ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.

 

— ಭಂಡಾರಿವಾರ್ತೆ.

Leave a Reply

Your email address will not be published. Required fields are marked *