September 20, 2024
ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಕೂಳೂರು ಕಲ್ಪವೃಕ್ಷ ದಿವಂಗತ ನಾಗರಾಜ ಭಂಡಾರಿ ಮತ್ತು ಸುಮತಿ ನಾಗರಾಜ ಭಂಡಾರಿ ದಂಪತಿಯ ತೃತೀಯ ಪುತ್ರ.

ಚಿ|| ಸುಧೀಂದ್ರ ಭಂಡಾರಿ.

ಮತ್ತು
ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಅಗರಿ ಶ್ರೀಮತಿ ಮತ್ತು ಶ್ರೀ ಲಕ್ಷ್ಮಣ ಭಂಡಾರಿಯವರ ಸುಪುತ್ರಿ…

ಚಿ||ಸೌ|| ನಿಶ್ಮಿತಾ.

ಇವರ ಶುಭ ವಿವಾಹವು ಏಪ್ರಿಲ್ 30 ರ ಸೋಮವಾರ ಉಜಿರೆಯ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ವೈಭವದಿಂದ ನೆರವೇರಿತು.
ಮದುವೆಯ ಶುಭ ಸಮಾರಂಭದಲ್ಲಿ ಉಪಸ್ಥಿತರಿದ್ದ ಬಂಧು ಮಿತ್ರರು,ಕುಟುಂಬಸ್ಥರು, ಆತ್ಮೀಯರು ನವವಧುವರರಿಗೆ ಶುಭ ಕೋರಿ ಆಶೀರ್ವದಿಸಿದರು.
ಗೃಹಾಸ್ಥಾಶ್ರಮಕ್ಕೆ ಪಾದಾರ್ಪಣೆಗೈದ ನವ ವಿವಾಹಿತರಿಗೆ ಶ್ರೀ ದೇವರು ಸಕಲ ಸನ್ಮಂಗಳವನ್ನುಂಟು ಮಾಡಲಿ.ಅವರ ಸಕಲ ಇಷ್ಠಾರ್ಥಗಳನ್ನೂ ಈಡೇರಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ.

Leave a Reply

Your email address will not be published. Required fields are marked *