September 20, 2024

Rajesh weds Deekshitha

ಮುಂಬಯಿಯ ಗೋರೆಗಾಂವ್ ನ ದಿವಂಗತ ಎರ್ಮಾಲ್ ಶ್ಯಾಮ್ ಭಂಡಾರಿ ಮತ್ತು ಶಾರದಾ ಶ್ಯಾಮ್ ಭಂಡಾರಿ ದಂಪತಿಯ ಸುಪುತ್ರ….

ಚಿ|| ರಾಜೇಶ್.

ಇವರ ವಿವಾಹವು ಮಂಗಳೂರು ಬಳ್ಕುಂಜೆಯ ಶ್ರೀ ವಿಶ್ವನಾಥ ಭಂಡಾರಿ ಮತ್ತು ಶ್ರೀಮತಿ ಶೋಭಾ ವಿಶ್ವನಾಥ ಭಂಡಾರಿ ದಂಪತಿಯ ಸುಪುತ್ರಿ…

ಚಿ||ಸೌ|| ದೀಕ್ಷಿತಾ.

ರೊಂದಿಗೆ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನ ದಲ್ಲಿ ಏಪ್ರಿಲ್ 30 ರ ಸೋಮವಾರ ಅತ್ಯಂತ ಸಡಗರ ಸಂಭ್ರಮದಿಂದ ನೆರವೇರಿತು. 

ವಿವಾಹ ಸಮಾರಂಭದಲ್ಲಿ ಉಪಸ್ಥಿತರಿದ್ದ ಬಂಧು ಮಿತ್ರರು, ಕುಟುಂಬಸ್ಥರು, ಆತ್ಮೀಯರು, ಹಿತೈಷಿಗಳು ನವ ವಧುವರರಿಗೆ ಹರಸಿ ಶುಭ ಹಾರೈಸಿದರು.

ಸೋಮವಾರದ ಶುಭದಿನದಂದು ದಾಂಪತ್ಯ ಜೀವನಕ್ಕೆ ಪಾದಾರ್ಪಣೆಗೈದ ಸುಂದರ ಜೋಡಿ ಹಕ್ಕಿಗಳ ಬಾಳು ಹಾಲು ಜೇನಿನಂತೆ ಸಿಹಿಯಾಗಿರಲಿ,ಶ್ರೀ ದೇವರು ನಿಮ್ಮ ಬಾಳಿನಲ್ಲಿ ಉತ್ತರೋತ್ತರ ಅಭಿವೃದ್ಧಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ, ಮದುವೆಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *