September 20, 2024

ಮಂಗಳೂರು ಬಿ.ಸಿ.ರೋಡ್ ನ ಶ್ರೀ ಆನಂದ ಭಂಡಾರಿ ಮತ್ತು ಶ್ರೀಮತಿ ಸುನಂದಾ ಆನಂದ ಭಂಡಾರಿ ದಂಪತಿಯ ಅರವತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವ ಮತ್ತು ಷಷ್ಟ್ಯಾಬ್ದಿ ಕಾರ್ಯಕ್ರಮವನ್ನು ಮೇ 21 ರ ಸೋಮವಾರ ಅತೀ ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಶುಭ ಸಂದರ್ಭದಲ್ಲಿ ಮಕ್ಕಳು,ಸೊಸೆಯಂದಿರು,ಅಳಿಯಂದಿರು,ಮೊಮ್ಮಕ್ಕಳು,ಕುಟುಂಬಸ್ಥರು ಸಂಭ್ರಮದಿಂದ ಪಾಲ್ಗೊಂಡಿದ್ದರು.
ದಾಂಪತ್ಯ ಜೀವನದ ಷಷ್ಠಾಬ್ದಿ ಆಚರಿಸಿಕೊಂಡ ಸಂಭ್ರಮದಲ್ಲಿರುವ ದಂಪತಿಗೆ….
ಶ್ರೀ ಶಂಕರ ಭಂಡಾರಿ,ಶ್ರೀಮತಿ ಉಷಾ ಶಂಕರ ಭಂಡಾರಿ.ಸುರತ್ಕಲ್,ಶ್ರೀ ಶೇಖರ್ ಭಂಡಾರಿ,ಶ್ರೀಮತಿ ಸರೋಜಿನಿ ಶೇಖರ್ ಭಂಡಾರಿ.ಕುತ್ಯಾರು,ಶ್ರೀಮತಿ ನಳಿನಿ.ಆರ್.ಭಂಡಾರಿ.ಮುಂಬಯಿ,ಶ್ರೀ ದಿನೇಶ್ ಭಂಡಾರಿ,ಶ್ರೀಮತಿ ಲತಾ ದಿನೇಶ್ ಭಂಡಾರಿ.ಮುಂಬಯಿ,ಶ್ರೀ ಅಶೋಕ್ ಭಂಡಾರಿ,ಶ್ರೀಮತಿ ಸಾರಿಕಾ ಅಶೋಕ್ ಭಂಡಾರಿ.ಬಿ.ಸಿ.ರೋಡ್,ಶ್ರೀ ಅಶೋಕ್ ಭಂಡಾರಿ,ಶ್ರೀಮತಿ ವಿನೋದ ಅಶೋಕ್ ಭಂಡಾರಿ. ಮುಂಬಯಿ,ಶ್ರೀಮತಿ ಸಾರಿಕಾ.ಡಿ.ಭಂಡಾರಿ.ಬಂಟ್ವಾಳ ಮತ್ತು ಕುಟುಂಬಸ್ಥರು ಶುಭ ಕೋರಿದ್ದಾರೆ.

ವೈವಾಹಿಕ ಜೀವನದ ಅರವತ್ತು ವಸಂತಗಳನ್ನು ಪೂರೈಸಿ ಮರಳಿ ಅರಳಿ ಮರುಮಾಂಗಲ್ಯ ಧಾರಣೆ ಮಾಡಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡು ಸಂಭ್ರಮದಲ್ಲಿರುವ ದಂಪತಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಹರಸಿ ಹಾರೈಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃದಯಪೂರ್ವಕವಾಗಿ ಶುಭ ಹಾರೈಸುತ್ತದೆ.

ವರದಿ : ಶ್ರೀಪಾಲ್ ಭಂಡಾರಿ ನೆಲ್ಯಾಡಿ

1 thought on “ಮಂಗಳೂರಿನ ಶ್ರೀ ಆನಂದ ಭಂಡಾರಿ ಮತ್ತು ಶ್ರೀಮತಿ ಸುನಂದ ಭಂಡಾರಿ ದಂಪತಿಯ ಷಷ್ಟ್ಯಾಬ್ದಿ

  1. ಇನ್ನೂ ನೂರ್ಕಾಲ ಹೀಗೆ ಬಾಳಿ, ಕಿರಿಯರಿಗೆ ನಿಮ್ಮ ಆರ್ಶೀವಾದ ಯಾವತ್ತೂ ಇರಲಿ.

Leave a Reply

Your email address will not be published. Required fields are marked *