September 20, 2024
        
        ವಾಮಂಜೂರು ಶ್ರೀ ರಾಜಶೇಖರ ಭಂಡಾರಿ ತಿಪಟೂರು ಮತ್ತು ಶ್ರೀಮತಿ ಕದ್ರಿ ರಾಜೇಶ್ವರಿ ರಾಜಶೇಖರ ಭಂಡಾರಿ ದಂಪತಿಯ ಪುತ್ರ…
                                 ಚಿ|| ಅನಿಲ್ ಭಂಡಾರಿ.
ಮತ್ತು ಕೊಟ್ಟಾರದ ದಿವಂಗತ ಕದ್ರಿ ಮುರುಳೀಧರ ಭಂಡಾರಿ ಮತ್ತು ಮೋಹಿನಿ ಮುರುಳೀಧರ ಭಂಡಾರಿ ದಂಪತಿಯ ಪುತ್ರಿ…
                                   ಚಿ||ಸೌ|| ಅಕ್ಷಯ.
           ಇವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ಜೂನ್ 27 ರ ಬುಧವಾರ ಬೆಂಗಳೂರು ಮತ್ತೀಕೆರೆಯ ವಧುವಿನ ಮನೆಯಲ್ಲಿ ತಾಯಿ,ಅತ್ತೆ,ಮಾವ,ಸಹೋದರರಾದ ಅಜೇಯ್ ಭಂಡಾರಿ,ವಿಜಯ್ ಭಂಡಾರಿ ಮತ್ತು ಆತ್ಮೀಯರ ಉಪಸ್ಥಿತಿಯಲ್ಲಿ ಸರಳವಾಗಿ ನೆರವೇರಿತು.
Advt.
          ಅಕ್ಷಯಾರವರು ಏರ್ ಟೆಲ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು,ಅನಿಲ್ ರವರು ಕೋರಮಂಗಲದ ಬೀ ಲಾಂಝ್ ಪ್ರೊಫೆಷನಲ್ ಸಲೂನ್ ನಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
 
          ಇವರ ವಿವಾಹ ನಿಶ್ಚಿತಾರ್ಥಕ್ಕೆ ಕೊಟ್ಟಾರ ಮತ್ತು ವಾಮಂಜೂರು ಭಂಡಾರಿ ಕುಟುಂಬಸ್ಥರು, ಆತ್ಮೀಯರು, ಸಹೋದ್ಯೋಗಿಗಳು ಶುಭ ಹಾರೈಸಿದ್ದಾರೆ. ವಿವಾಹ ನಿಶ್ಚಿತಾರ್ಥದ ಬಂಧನಕ್ಕೊಳಗಾದ ನವ ಜೋಡಿಗಳು ಆದಷ್ಟು ಶೀಘ್ರ ವಿವಾಹ ಬಂಧನದೊಳೊಂದಾಗಲಿ, ಶ್ರೀ ದೇವರು ಸಕಲ ಸನ್ಮಂಗಳವನ್ನುಂಟು ಮಾಡಿ ಹರಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”
ವರದಿ: ಶ್ರೀಮತಿ ಶಾಂತಲಾ ಹರೀಶ್ ಭಂಡಾರಿ. ವಿಟ್ಲ.

Leave a Reply

Your email address will not be published. Required fields are marked *