September 20, 2024
ಕಾರ್ಕಳ ತಾಲೂಕು ಪಳ್ಳಿ ನಿಂಜೂರಿನ ವಿಶ್ವ ಕೃಪಾ ನಿವಾಸಿ ಹಿರಿಯರಾದ ಶ್ರೀ ಕುಟ್ಟಿ ಭಂಡಾರಿ (80 ವರ್ಷ) ಯವರು ನಿನ್ನೆ ಸಂಜೆ ಅಲ್ಪ ಅನಾರೋಗ್ಯದ ಕಾರಣ ವಿಧಿವಶರಾಗಿದ್ದಾರೆ. ದಿನಾಂಕ 13/07/2018 ರಂದು ಇವರ ಅಂತ್ಯಕ್ರಿಯೆ ನಡೆಯಿತು. ಇವರು ಕ್ಷೌರಿಕ ವೃತ್ತಿಯೊಂದಿಗೆ ಎರಡು ಗ್ರಾಮಗಳ ಕೊಡಮಣಿತ್ತಾಯ ದೈವಗಳ ಸತ್ತಿಗೆ (ದೈವದ ಕೊಡೆ) ಹಿಡಿಯುವ ಗೌರವದ ವೃತ್ತಿಯನ್ನು ಮಾಡುತ್ತಿದ್ದರು. 
ಇವರು ತಮ್ಮ ಮಕ್ಕಳಾದ ಶ್ರೀಮತಿ ಸರೋಜಿನಿ ಭಂಡಾರಿ ಕುತ್ಪಾಡಿ , ಶ್ರೀಮತಿ ಶಾಲಿನಿ ಭಂಡಾರಿ ಕುತ್ಪಾಡಿ , ಸೋದರಿ ಶ್ರೀ ವಾರಿಜಾ ಶೇಖರ ಭಂಡಾರಿ ನಿಂಜೂರು, ಸೋದರರಾದ ಶ್ರೀ ಸಾಧು ಭಂಡಾರಿ ಅಯ್ಯಪ್ಪ ನಗರ, ಶ್ರೀ ಗೋಪಾಲ ಭಂಡಾರಿ ಬೆಳ್ತಂಗಡಿ , ಸೋದರಳಿಯಂದಿಯರು, ಸೋದರ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ದಿವಂಗತರಾದ ಶ್ರೀ ಕುಟ್ಟಿ ಭಂಡಾರಿಯವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಮತ್ತು ಕುಟುಂಬಕ್ಕೆ ಅಗಲಿಕೆಯ ನೋವನ್ನು ಮರೆಸುವ ಶಕ್ತಿಯನ್ನು ಶ್ರೀ ದೇವರು ನೀಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಬೇಡುತ್ತದೆ.
-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *