September 20, 2024

ಸಾಗರದ ದಿವಂಗತ ಶಿವರಾಮ ಭಂಡಾರಿಯವರ ಪತ್ನಿ ಶಾರದಮ್ಮ ಶಿವರಾಮ ಭಂಡಾರಿಯವರು ಆಗಸ್ಟ್ 15 ರ ಬುಧವಾರ ವಿಧಿವಶರಾದರು.ಅವರಿಗೆ 80 ವರ್ಷ ವಯಸ್ಸಾಗಿತ್ತು.


ಸುಮಾರು ನಾಲ್ಕು ವರ್ಷಗಳಿಂದ ಪ್ರಾಶ್ವವಾಯು ಪೀಡಿತರಾಗಿದ್ದ ಇವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು.
ಸಾಗರ ತಾಲೂಕು ಸವಿತಾ ಸಮಾಜದ ಮಾಜಿ ಅಧ್ಯಕ್ಷರು,ಸಾಗರ ಭಂಡಾರಿ ಸಮಾಜ ಸಂಘದ ಅಧ್ಯಕ್ಷರು ಹಾಗೂ ಭಾರತೀಯ ಜನತಾ ಪಕ್ಷದ ಧುರೀಣರೂ ಆಗಿರುವ ಶ್ರೀ ಕೃಷ್ಣಮೂರ್ತಿ ಭಂಡಾರಿಯವರ ಮಾತೃಶ್ರೀಯವರಾದ ಶಾರದಮ್ಮ ಶಿವರಾಮ ಭಂಡಾರಿಯವರು ಇಬ್ಬರು ಗಂಡು ಮಕ್ಕಳು,ಮೂವರು ಹೆಣ್ಣು ಮಕ್ಕಳು,ಅಳಿಯಂದಿರು, ಸೊಸೆಯಂದಿರು,ಮೊಮ್ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧು ಬಾಂಧವರನ್ನು ಅಗಲಿದ್ದಾರೆ.

ಕುಟುಂಬದ ಹಿರಿಯರ ಅಗಲಿಕೆಯ ದುಃಖದಲ್ಲಿರುವ ದುಃಖತಪ್ತರಿಗೆ ಭಗವಂತನು ಆ ದುಃಖವನ್ನು ಭರಿಸುವ ಶಕ್ತಿಯನ್ನು ದಯಪಾಲಿಸಲಿ,ಮೃತರ ದಿವ್ಯಾತ್ಮಕ್ಕೆ ಶ್ರೀ ದೇವರು ಚಿರಶಾಂತಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ.

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *