September 20, 2024

ಮಂಗಳೂರು ತಾಲೂಕು  ಕಿಲ್ಪಾಡಿಯ ದಿವಂಗತ ಸಂಜೀವ ಭಂಡಾರಿ ಮತ್ತು ದಿವಂಗತ ವತ್ಸಲಾ ಸಂಜೀವ ಭಂಡಾರಿ ದಂಪತಿಯ ಪುತ್ರ…
ಚಿ॥ ದಿವಾಕರ್.  
ಹಾಗೂ

ಮಂಗಳೂರು ತಾಲೂಕು ಅತ್ತಾವರದ ಶ್ರೀ ಗಣೇಶ್ ಭಂಡಾರಿ ಮತ್ತು ದಿವಂಗತ ಬೀನಾ ಗಣೇಶ್ ಭಂಡಾರಿ ದಂಪತಿಯ ಪುತ್ರಿ…
ಚಿ॥ ಸೌ॥ ಅಮೃತಾ.

ಇವರ ವಿವಾಹವು 2018 ರ ಮೇ 13 ಭಾನುವಾರದಂದು  ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ  ಸನ್ನಿಧಾನ ದಲ್ಲಿ ಶ್ರೀ ದೇವಿಯ  ಕೃಪಾಕಟಾಕ್ಷದೊಂದಿಗೆ ಸರಳವಾಗಿ ನೆರವೇರಿತು.


ಶ್ರೀ ದಿವಾಕರ್ ಭಂಡಾರಿಯವರು ಪ್ರಸ್ತುತ ಮುಂಬಯಿಯಲ್ಲಿ ನೆಲೆಸಿದ್ದಾರೆ. ಮದುವೆಯ ಔತಣ ಕೂಟವು ಮೇ 16 ಬುಧವಾರದಂದು  ಮಂಗಳೂರಿನ ಸೈಂಟ್ ಸೆಬಾಸ್ಟಿನ್ ಪ್ಲಾಟಿನಂ ಜ್ಯುಬಿಲಿ ಹಾಲ್ ಬೆಂದೂರ್ ನಲ್ಲಿ ಬಂಧುಮಿತ್ರರು, ಕುಟುಂಬಸ್ಥರು, ಹಿತೈಷಿಗಳ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ಜರುಗಿತು.


ಶ್ರೀ ದೇವರು ನವದಂಪತಿಗಳಿಗೆ ಆರೋಗ್ಯ, ಆಯುಷ್ಯ,ಐಶ್ವರ್ಯ, ಸುಖ ಶಾಂತಿ ನೆಮ್ಮದಿಯ ಬದುಕನ್ನು  ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾತೆ೯” ಯು ಶುಭ  ಹಾರೈಸುತ್ತದೆ.

 

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *