September 20, 2024

ಮಂಗಳೂರು ಮಣ್ಣಗುಡ್ಡೆಯ ದಿವಂಗತ ಎಂ.ರಾಮ ಭಂಡಾರಿಯವರ ಧರ್ಮಪತ್ನಿ

ಎಂ.ಪದ್ಮಾವತಿ

ಯವರು ಜುಲೈ 29 ರ ಭಾನುವಾರ ಮಂಗಳೂರಿನ ಲೇಡಿಹಿಲ್ ಚರ್ಚ್ ನ ಮಿನಿಹಾಲ್ ನಲ್ಲಿ ತಮ್ಮ ಎಪ್ಪತ್ತೈದನೇ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.

ಈ ಶುಭ ಸಂದರ್ಭದಲ್ಲಿ ಅವರಿಗೆ

ಮಗ ಶ್ರೀ ಪೂರ್ಣ ಪ್ರಸಾದ್, ಸೊಸೆ ಶ್ರೀಮತಿ ಉಷಾ ಪೂರ್ಣ ಪ್ರಸಾದ್,
ಮಗಳು ಶ್ರೀಮತಿ ಹರಿಣಿ ವಿಜೇಂದ್ರ ಭಂಡಾರಿ, ಅಳಿಯ ಶ್ರೀ ವಿಜೇಂದ್ರ ಭಂಡಾರಿ,
ಮೊಮ್ಮಕ್ಕಳಾದ ಅನುರಾಗ್.ಎಂ.ವಿ, ಪ್ರಣವ್.ಪಿ, ಜನನಿ.ಪಿ ಮತ್ತು

ಕುಟುಂಬ ವರ್ಗದವರು, ಆತ್ಮೀಯರು, ಹಿತೈಷಿಗಳು ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದರು.

ಎಪ್ಪತ್ತೈದನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಪದ್ಮಾವತಿಯವರಿಗೆ ಶ್ರೀ ದೇವರು ಆಯುರಾರೋಗ್ಯವನ್ನು ನೀಡಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ, ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.                                                                                                             

ವರದಿ : ಪವಿತ್ರ ಭಂಡಾರಿ ಕರಂಬಳ್ಳಿ.
ವಿ.ಎಮ್.ನಗರ. ಉಡುಪಿ.

Leave a Reply

Your email address will not be published. Required fields are marked *