September 20, 2024

ಬಂಧುಗಳೇ…

ನಾನು ನವೀನ್ ಭಂಡಾರಿ. ಕೊಲ್ಲೂರು ಬಳಿಯ ಹಲ್ಕಲ್ ಗ್ರಾಮದವನು.ನಾನು ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡಿದ್ದು,ನನ್ನ ದುಡಿಮೆಯಿಂದ ವಯಸ್ಸಾದ ತಂದೆ,ತಾಯಿ ಮತ್ತು ಓದುತ್ತಿರುವ ತಮ್ಮ ಇವರೊಂದಿಗೆ ನನ್ನ ಜೀವನ ನಿರ್ವಹಣೆ ಮಾಡುವುದೇ ದುಸ್ತರವಾಗಿತ್ತು.ಈಗ ಗಾಯದ ಮೇಲೆ ಬರೆ ಎಳೆದಂತೆ ನನ್ನ ತಮ್ಮ ಪ್ರವೀಣ್ ಭಂಡಾರಿ ಸೆಪ್ಟೆಂಬರ್ 13 ರಂದು ಬೈಕ್ ನಲ್ಲಿ ಹೋಗುವಾಗ ಆಯತಪ್ಪಿ ಬಿದ್ದು ತಲೆಗೆ ಬಲವಾದ ಪೆಟ್ಟಾಗಿ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.ಅವನ ಶಸ್ತ್ರಚಿಕಿತ್ಸೆಗೆ ವೈದ್ಯರು ಮೂರರಿಂದ ನಾಲ್ಕು ಲಕ್ಷ ರೂಪಾಯಿಗಳ ಅವಶ್ಯಕತೆಯಿದೆಯೆಂದು ತಿಳಿಸಿದ್ದಾರೆ.ಮೊದಲೇ ಆರ್ಥಿಕವಾಗಿ ಬಸವಳಿದಿದ್ದ ನನಗೆ ದಿಕ್ಕೇ ತೋಚದಂತಾಗಿದೆ.

 ದಯವಿಟ್ಟು ದಾನಿಗಳು ಸಹಾಯಹಸ್ತ ಚಾಚಿದರೆ ಕೇವಲ ಹತ್ತೊಂಬತ್ತು ವರ್ಷ ವಯಸ್ಸಿನ ನನ್ನ ತಮ್ಮ ಪ್ರವೀಣನನ್ನು ಅಪಾಯದಿಂದ ಪಾರು ಮಾಡಿದ ಪುಣ್ಯ ನಿಮಗೆ ದೊರಕುತ್ತದೆ.ದಾನಿಗಳು ಉದಾರವಾಗಿ ಧನಸಹಾಯ ನೀಡುವ ಮೂಲಕ ನಮ್ಮ ನೆರವಿಗೆ ಧಾವಿಸುತ್ತೀರೆಂದು ನಂಬಿರುವ….

 

ನವೀನ್ ಭಂಡಾರಿ.
ಶೇಷು ಭಂಡಾರಿ (ತಂದೆ)
ಲಲಿತ ಶೇಷು ಭಂಡಾರಿ (ತಾಯಿ)
ಶ್ರೀ ಮೂಕಾಂಬಿಕಾ ನಿಲಯ.
ಹಲ್ಕಲ್, ಕುಂದಾಪುರ(ತಾ)
ಉಡುಪಿ.
ಮೊಬೈಲ್ : 9482115611.

ಹಣ ಕಳಿಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು.
ಖಾತೆದಾರರ ಹೆಸರು : ಪ್ರವೀಣ್.
ಖಾತೆ ನಂಬರ್ : 01752200065714
ಬ್ಯಾಂಕ್ : ಸಿಂಡಿಕೇಟ್ ಬ್ಯಾಂಕ್.
ಬ್ರಾಂಚ್ : ಕೊಲ್ಲೂರು.
IFSC Code : SYNB0000175

ಮಾಹಿತಿ:ಪುನೀತ್ ಭಂಡಾರಿ ಉಜಿರೆ

ಮೊಬೈಲ್ :9035952515

Leave a Reply

Your email address will not be published. Required fields are marked *