September 20, 2024
ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯ
ಇದರ ಮಾಸಿಕ ಸಭೆಯು ದಿನಾಂಕ 07. 10. 2018 ರ ಭಾನುವಾರ ಹೋಟೆಲ್ ಕದಂಬ, ಮೋದಿ ಹಾಸ್ಪಿಟಲ್ ಹತ್ತಿರ ರಾಜಾಜಿನಗರ ಬೆಂಗಳೂರು ಇಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಉಮೇಶ್ ಎ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ 25ನೇ ಡಿಸೆಂಬರ್ 2018 ರಂದು ನಡೆಯುವ ವಾರ್ಷಿಕ ಮಹಾಸಭೆ ಹಾಗು ಕೌಟುಂಬಿಕ ಸ್ನೇಹಕೂಟವನ್ನು ಮಹಾರಾಷ್ಟ್ರ ಮಂಡಳಿ ಗಾಂಧಿನಗರ ಬೆಂಗಳೂರು ಇಲ್ಲಿ ನಡೆಸಲು ತೀರ್ಮಾನಿಸಲಾಯಿತು. ಆದಿನ ಬೆಳಿಗ್ಗೆ 9.00 ಗಂಟೆಯಿಂದ ಕಾರ್ಯಕ್ರಮ ಆರಂಭಗೊಂಡು ಮಕ್ಕಳ ಆಟೋಟ ಸ್ಪರ್ಧೆ ನಂತರ ವಾರ್ಷಿಕ ಲೆಕ್ಕಪತ್ರ ಮಂಡನೆ ಹಾಗು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ತದನಂತರ ಭೋಜನ, ಮದ್ಯಾಹ್ನ  2 ಗಂಟೆಗೆ ಸರಿಯಾಗಿ ಮಹಾಸಭೆ ನಡೆಯಲಿದೆ.
ನಂತರ ಬೆಂಗಳೂರು ವಲಯ ಭಂಡಾರಿ ಬಂಧುಗಳ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕಮ ನಡೆಯಲಿದ್ದು ಸಂಜೆ 6.30ಕ್ಕೆ ಕಾರ್ಯಕ್ರಮ ಕೊನೆಗೂಳ್ಳಲಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ವರದಿ- ಪ್ರದೀಪ್ ಫಲಿಮಾರು
ಸಂಘಟನಾ ಕಾರ್ಯದರ್ಶಿ
ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯ..

Leave a Reply

Your email address will not be published. Required fields are marked *