September 20, 2024

ಬಂಟ್ವಾಳ ತಾಲೂಕು ಸೊರ್ನಾಡ್ ದಿವಂಗತ ತಿಮ್ಮಪ್ಪ ಭಂಡಾರಿ ಮತ್ತು ದಿವಂಗತ ಜಾನಮ್ಮ ತಿಮ್ಮಪ್ಪ ಭಂಡಾರಿ ದಂಪತಿಯ ಪುತ್ರ ಶ್ರೀ ಹರೀಶ್ ಕಾವೂರು ಹಾಗೂ ಮಡಿಕೇರಿ  ದಿವಂಗತ ಸುಬ್ಬಯ್ಯ ಭಂಡಾರಿ ಮತ್ತು  ದಿವಂಗತ ದೇವಕಿ ಸುಬ್ಬಯ್ಯ ಭಂಡಾರಿ ದಂಪತಿಯ ಪುತ್ರಿ  ಶ್ರೀಮತಿ ಸುಜಾತ ಹರೀಶ್ ರವರು ತಮ್ಮ ದಾಂಪತ್ಯ ಜೀವನದ 33 ನೇ ವರ್ಷದ ಸಂಭ್ರಮಾಚರಣೆಯನ್ನು ನವೆಂಬರ್‌ 1, 2018 ರ ಗುರುವಾರದಂದು ಮಂಗಳೂರು ಕಾವೂರು ಗಾಂಧಿನಗರದ ತಮ್ಮ ಮನೆಯಲ್ಲಿ ಸಡಗರ ಸಂಭ್ರಮದಿಂದ  ಆಚರಿಸಿಕೊಳ್ಳುತ್ತಿದ್ದಾರೆ.

ಶ್ರೀ ಹರೀಶ್ ರವರು  ಮಂಗಳೂರು ತಾಲೂಕು ವ್ಯವಸಾಯ ಕೃಷಿ ಉತ್ಪನ್ನ  ಸಹಕಾರಿ ಮಾರಾಟ ಸಂಘ, ಕೂಳೂರು ಇಲ್ಲಿ ಸೇವೆ ಸಲ್ಲಿಸಿ  ನಿವೃತ್ತ ಜೀವನ ನಡೆಸುತ್ತಿದ್ದರೆ, ಶ್ರೀಮತಿ ಸುಜಾತರವರು ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಉದ್ಯೋಗಿಯಾಗಿದ್ದಾರೆ. ಪುತ್ರಿ ಶ್ರೀಮತಿ ಚೈತ್ರಾ ಮತ್ತು ಅಳಿಯ ಡಾ॥ ಪ್ರಸಾದ್ ಅಮೇರಿಕಾದ ಕೆಂಟ್ಟಾಗಿಯ ಲೆಸ್ಸಿಂಗ್ಟನ್ ನಲ್ಲಿ ವೈದ್ಯ ವೃತ್ತಿಯನ್ನು ಮಾಡುತ್ತಿದ್ದರೆ. ಪುತ್ರ ಅಶ್ವಿನ್ ಬೆಂಗಳೂರಿನಲ್ಲಿ  ಐ.ಬಿ.ಎಮ್  ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ.


ದಾಂಪತ್ಯ ಜೀವನದ ಮೂವತ್ತೊಂದನೇ ವರ್ಷದ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ಪುತ್ರ ,ಪುತ್ರಿ, ಅಳಿಯ,ಮೊಮ್ಮಕ್ಕಳು , ಸಹೋದರ ಸಹೋದರಿಯರು, ಭಾವಂದಿರು, ಅತ್ತಿಗೆಯಂದಿರು ಬಂದು ಮಿತ್ರರು ಶುಭ ಹಾರೈಸುತ್ತಿದ್ದಾರೆ.

ಇವರ ಮುಂದಿನ ಜೀವನದಲ್ಲಿ  ಆರೋಗ್ಯ,ಆಯುಷ್ಯ ಸಕಲ ಐಶ್ವರ್ಯ,ಸುಖ ಶಾಂತಿ  ನೆಮ್ಮದಿಯ ಬದುಕನ್ನು  ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ  ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.

 

 

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *