September 20, 2024

            ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಗೌಡಹಳ್ಳಿ ಗ್ರಾಮದ ದಿವಂಗತ ರಮೇಶ್.ಜಿ.ಆರ್. ಮತ್ತು ಡಿ.ಸಿ. ಅನಿತಾ ದಂಪತಿಯ ಪುತ್ರಿ.
                                     ಚಿ||ಸೌ|| ನಿಶ್ಚಿತ.ಜಿ.ಆರ್.
ಮತ್ತು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೇಹೊನ್ನೂರು, ಮಾಗುಂಡಿ ಗ್ರಾಮದ ದಿವಂಗತ ಕುಮಾರ್ ಮತ್ತು ಸರೋಜಮ್ಮ ಕುಮಾರ್ ದಂಪತಿಯ ಪುತ್ರ.
                                       ಚಿ|| ಶಬರೀಶ್.ಎಂ.ಕೆ.
           ಇವರ ವಿವಾಹ ಮಹೋತ್ಸವವು ನವೆಂಬರ್ 14,2018 ರ ಬುಧವಾರ ಬೆಳಿಗ್ಗೆ 10 ರಿಂದ 11 ಗಂಟೆಯ ಧನುರ್ ಲಗ್ನ ಸುಮುಹೂರ್ತದಲ್ಲಿ ಮೂಡಿಗೆರೆಯ ‘ಚರ್ಚ್ ಹಾಲ್” ನಲ್ಲಿ ಅತಿ ವಿಜೃಂಭಣೆಯಿಂದ ನೆರವೇರಿತು.


          ವಿವಾಹ ಸಮಾರಂಭದಲ್ಲಿ ಉಪಸ್ಥಿತರಿದ್ದ ಬಂದು ಬಾಂಧವರು,ಸ್ನೇಹಿತರು,ಹಿತೈಷಿಗಳು,ಆತ್ಮೀಯರು ನೂತನ ವಧು ವರರಿಗೆ ಶುಭ ಹಾರೈಸಿ, ಆಶೀರ್ವದಿಸಿದರು.
          ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ ನಿಶ್ಚಿತ ಮತ್ತು ಶಬರೀಶ್ ದಂಪತಿಗಳಿಗೆ ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.

ವರದಿ : ಶಿವಾಸ್ ಅರುಣ್ ಭಂಡಾರಿ. ಮುಂಬಯಿ.

Leave a Reply

Your email address will not be published. Required fields are marked *