September 20, 2024

 

ಚಿಕ್ಕಮಗಳೂರು ಜಿಲ್ಲೆಯ  ಮಾಗಡಿ ಕೈಮಾರ
ದಿ.ಶ್ರೀ ಜಯಶೇಖರ್ ಭಂಡಾರಿ ಮತ್ತು  ಶ್ರೀಮತಿ ಲತಾ ಜಯ ಶೇಖರ್ ದಂಪತಿಯ ಪುತ್ರ
ಚಿ|| ಆದಿತ್ಯ ಶೇಖರ್
ಹಾಗೂ ಹಾಸನ ಜಿಲ್ಲೆ  ಅರಕಲಗೋಡು ತಾಲೂಕು ದೊಡ್ಡಮಗ್ಗೆ  ಶ್ರೀ ವೆಂಕಟೇಶ್ ಮತ್ತು ಶ್ರೀಮತಿ ಪ್ರಮೀಳಾ ದಂಪತಿಯ ಪುತ್ರಿ.
ಚಿ||ಸೌ|| ಸ್ವಾತಿ.

 

ಇವರ ವಿವಾಹವು ನವೆಂಬರ್‌  18,2018 ರ ಭಾನುವಾರ  ಚಿಕ್ಕಮಗಳೂರು ಜಿಲ್ಲೆ ಕೋಟೆಯ “ಕೀರ್ತಿ ಕೃಷ್ಣ ಕನ್ವೆನ್ಷನ್ ಹಾಲ್” ನಲ್ಲಿ  ಬಂದು  ಮಿತ್ರರು  ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಬಹಳ  ವಿಜೃಂಭಣೆಯಿಂದ ನೆರವೇರಿತು.
ಆದಿತ್ಯ ಶೇಖರ್ ಮತ್ತು ಸ್ವಾತಿಯವರ ವಿವಾಹ ಮಹೋತ್ಸವದಲ್ಲಿ ಉಪಸ್ಥಿತರಿದ್ದ ಬಂಧುಗಳು,ಆತ್ಮೀಯರು,ಹಿತೈಷಿಗಳು,ಕುಟುಂಬಸ್ಥರು ನವ ವಿವಾಹಿತರಿಗೆ ಶುಭ ಹಾರೈಸಿ, ಯಥೋಚಿತ ಸತ್ಕಾರವನ್ನು ಸ್ವೀಕರಿಸಿದರು.
 


ನೂತನ ವಧುವರರಿಗೆ ಭಗವಂತನು  ಆರೋಗ್ಯ  ಆಯುಷ್ಯ  ಸಕಲ ಐಶ್ವರ್ಯವನ್ನು ಕೊಟ್ಟು  ಚಿರಕಾಲ ಸುಖ ಶಾಂತಿ ನೆಮ್ಮದಿಯಿಂದ ಬಾಳುವಂತೆ ಆಶೀರ್ವದಿಸಲಿ ಎಂದು  ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ  ಹಾರೈಸುತ್ತದೆ.

 

ವರದಿ :  ಶ್ರೀಕಾಂತ್ ಭಂಡಾರಿ
ಪಾಣೆಮಂಗಳೂರು.

Leave a Reply

Your email address will not be published. Required fields are marked *