September 20, 2024

ಪುತ್ತೂರು ಬೊಟ್ಯಾಡಿ ದಿವಂಗತ ತಿಮ್ಮಪ್ಪ ಭಂಡಾರಿ ಮತ್ತು ದಿವಂಗತ ಸೀತಾ ತಿಮ್ಮಪ್ಪ ಭಂಡಾರಿ ದಂಪತಿಗಳ ಪುತ್ರ…

ಶ್ರೀ ನಾರಾಯಣ್ ಭಂಡಾರಿ.

ಮತ್ತು ಪುತ್ತೂರು ತಾಲೂಕು ಸವಣೂರು ದಿವಂಗತ ಕರಿಯ ಭಂಡಾರಿ  ಮತ್ತು ದಿವಂಗತ ಚೆನ್ನಮ್ಮ ಕರಿಯ ಭಂಡಾರಿ ದಂಪತಿಗಳ ಪುತ್ರಿ…

ಶ್ರೀಮತಿ ಯಶೋಧ ನಾರಾಯಣ್ ಭಂಡಾರಿ.

ದಂಪತಿಯು ತಮ್ಮ ಮೂವತ್ತೊಂದನೆಯ ವರ್ಷದ ವಿವಾಹ ವಾರ್ಷಿಕೋತ್ಸವ ಮಹೋತ್ಸವವನ್ನು ಡಿಸೆಂಬರ್  27, 2018 ರ ಗುರುವಾರ ಬಿ.ಸಿ.ರೋಡ್‌ “ಶ್ರೀ ರಕ್ತೇಶ್ವರಿ ದೇವಸ್ಥಾನ” ದಲ್ಲಿ ವಿಶೇಷ ಪೂಜೆ  ಸಲ್ಲಿಸುವುದರೊಂದಿಗೆ ವಿಶಿಷ್ಠ ರೀತಿಯಲ್ಲಿ ಆಚರಿಸಿಕೊಂಡರು.

ಶ್ರೀಯುತ ನಾರಾಯಣ ಭಂಡಾರಿಯವರು  ಬಂಟ್ವಾಳ ಎಸ್‌.ವಿ.ಎಸ್‌ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ  ಮುಖ್ಯಸ್ಥರಾಗಿದ್ದು,ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಬಂಟ್ವಾಳ ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಆರ್ಥಿಕ ಸಂಕಷ್ಟದಲ್ಲಿರುವ ಹಲವಾರು ವಿಧ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುವ ಮೂಲಕ, ಯಾವುದೇ ಪ್ರಚಾರ ಬಯಸದೇ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮತ್ತು ಇವರ ಪತ್ನಿ ಶ್ರೀಮತಿ ಯಶೋಧ ಬಂಟ್ವಾಳದ ಬಿ.ಎಸ್‌.ಎನ್.ಎಲ್ ಕಚೇರಿ  ಅಧೀಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದಂಪತಿಗಳು ದಾಂಪತ್ಯ ಜೀವನದ ಮೂವತ್ತೊಂದನೆಯ ವರ್ಷದ ಸಂಭ್ರಮಾಚರಣೆಯ ಶುಭ ಸಂದರ್ಭದಲ್ಲಿ  ಬೊಟ್ಯಾಡಿ ಕುಟುಂಬಸ್ಥರು ಮತ್ತು ಸವಣೂರು ಕುಟುಂಬಸ್ಥರು ಹಾಗೂ ಪುತ್ರಿ ಯರಾದ ಶ್ರೀಮತಿ  ನವ್ಯ  ನಿತ್ಯಾನಂದ ಮತ್ತು ಕುಮಾರಿ  ನಿಧಿ, ಅಳಿಯ ಶ್ರೀ ನಿತ್ಯಾನಂದ ಭಂಡಾರಿ, ಕಾರ್ಕಳ ಹಾಗೂ ಮೊಮ್ಮಗಳಾದ ಬೇಬಿ ನಿಯ ಶುಭ ಹಾರೈಸುತ್ತಿದ್ದಾರೆ.

ದಂಪತಿಗಳಿಗೆ ಭಗವಂತನು ಆರೋಗ್ಯಭಾಗ್ಯ ಕರುಣಿಸಿ, ಸುಖ,ಶಾಂತಿ,ನೆಮ್ಮದಿ, ಸಂಪತ್ತು ,ಆಯುಷ್ಯ  ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ಧಿಕವಾಗಿ ಶುಭ ಹಾರೈಸುತ್ತದೆ.

ವರದಿ : ಶ್ರೀ ಜಗದೀಶ್ ಭಂಡಾರಿ ಕುರಿಯಾಳ.

Leave a Reply

Your email address will not be published. Required fields are marked *