September 20, 2024
ಬಂಟ್ವಾಳ ತಾಲೂಕು ವಿಟ್ಲ ಕೇಪು ಗ್ರಾಮದ ನೀರ್ಕಜೆ ಶ್ರೀ ನಾರಾಯಣ ಭಂಡಾರಿ ಮತ್ತು ಶ್ರೀಮತಿ ವಾರಿಜ ನಾರಾಯಣ ಭಂಡಾರಿ ದಂಪತಿಗಳ ಪುತ್ರ ಶ್ರೀ ನವೀನ್ ಕುಮಾರ್  ಹಾಗೂ ಶ್ರೀಮತಿ ದಿವ್ಯ ನವೀನ್ ಕುಮಾರ್ ದಂಪತಿಯು ನೂತನವಾಗಿ ನಿರ್ಮಿಸಿದ ಮನೆ…

“ಓಂಕಾರ”

ದ ಗೃಹ ಪ್ರವೇಶವನ್ನು ಜನವರಿ 9,2019 ರ ಬುಧವಾರ ಶ್ರೀ ಗಣಪತಿ ಹೋಮ,ಶ್ರೀ ಸತ್ಯ ನಾರಾಯಣ ಪೂಜೆ ಹಾಗೂ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿಸಿದರು. 
ನೂತನ ಮನೆಯ ಗೃಹಪ್ರವೇಶದ ಸುಸಂದರ್ಭದಲ್ಲಿ ಉಪಸ್ಥಿತರಿದ್ದ ಬಂಧುಮಿತ್ರರು,ಕುಟುಂಬಸ್ಥರು,ಹಿತೈಷಿಗಳು, ಸಹೋದ್ಯೋಗಿಗಳು ಶುಭ ಹಾರೈಸಿದರು. 
ಶ್ರೀ ನವೀನ್ ಕುಮಾರ್ ರವರು ಶ್ರೀರಾಮ್ ಟ್ರಾನ್ಸ್ ಪೋರ್ಟ್ ಸಂಸ್ಥೆಯ ಬೆಳ್ತಂಗಡಿ ಶಾಖೆಯ ಪ್ರಬಂಧಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಮತ್ತು ಶ್ರೀಮತಿ  ದಿವ್ಯ ನವೀನ್ ಕುಮಾರ್ ರವರು ಅಜ್ಜಿನಡ್ಕದ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 
ನೂತನ  ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿರುವ ಕುಟುಂಬಸ್ಥರಿಗೆ ಶ್ರೀ ದೇವರು ಸುಖ, ಶಾಂತಿ, ಆರೋಗ್ಯವಂತ, ನೆಮ್ಮದಿಯ ಬದುಕನ್ನು ಕಲ್ಪಿಸಲಿ,ವರ್ಷಂಪ್ರತಿ ಶುಭ ಕಾರ್ಯವನ್ನು ನಡೆಸುವ ಶಕ್ತಿಯನ್ನು  ತಾವು ನಂಬಿದ ದೈವ ದೇವರುಗಳು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಯು ಹಾರ್ದಿಕವಾಗಿ ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ.

Leave a Reply

Your email address will not be published. Required fields are marked *