September 20, 2024
ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಹೊಸನಗರ ಕರಿನಗೊಳ್ಳಿಯ ಮಹಾಬಲೇಶ್ವರ್ ಭಂಡಾರಿ ಜನವರಿ 13,2019 ರ ಭಾನುವಾರ ಮಧ್ಯಾಹ್ನ 3:30 ರ ಸುಮಾರಿಗೆ ಹೃದಯಸ್ತಂಭನಕ್ಕೊಳಗಾಗಿ ನಿಧನ ಹೊಂದಿದರು. ಅವರಿಗೆ ಐವತ್ತಾರು ವರ್ಷ ವಯಸ್ಸಾಗಿತ್ತು.
ಹೊಸನಗರದ ದಿವಂಗತ ಮಂಜಪ್ಪ ಭಂಡಾರಿ ಮತ್ತು ಲಕ್ಷ್ಮಮ್ಮ ಭಂಡಾರಿ ದಂಪತಿಯ ಪುತ್ರರಾದ ಇವರ ಪತ್ನಿ ಶ್ರೀಮತಿ ಶಕುಂತಲಾರವರು ಹಂದಾಡಿ ನಾರಾಯಣ ಭಂಡಾರಿ ಮತ್ತು ಹಂಗ್ಳೂರು ಲಕ್ಷ್ಮಿ (ಅಕ್ಕು) ಭಂಡಾರಿಯವರ ಪುತ್ರಿ. ಇವರ ಏಕೈಕ ಪುತ್ರ ಆಕಾಶ್ ಭಂಡಾರಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಶ್ರೀ ಮಹಾಬಲೇಶ್ವರ್ ಅವರ ನಿಧನದಿಂದ ದುಃಖತಪ್ತರಾದ ಅವರ ಪತ್ನಿ,ಪುತ್ರ, ಕುಟುಂಬಸ್ಥರು, ಬಂಧುಮಿತ್ರರು, ಆರೋಗ್ಯ ಇಲಾಖೆಯ ಅವರ ಸಹೋದ್ಯೋಗಿಗಳಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಶ್ರೀ ದೇವರು ದಯಪಾಲಿಸಲಿ, ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶ್ರೀದೇವರಲ್ಲಿ ಪ್ರಾರ್ಥಿಸುತ್ತದೆ.
“ಭಂಡಾರಿ ವಾರ್ತೆ.”

Leave a Reply

Your email address will not be published. Required fields are marked *